ಸುದ್ದಿ ಕಣಜ.ಕಾಂ | KARNATAKA | SPORTS NEWS
ಶಿವಮೊಗ್ಗ: ಭದ್ರಾವತಿಯ ವಿಐಎಸ್.ಎಲ್ ಕ್ರೀಡಾಂಗಣದಲ್ಲಿ ಪ್ರೀಮಿಯರ್ ಲೀಗ್(KWPL) ಟಿ20 ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 25 ರಿಂದ 27ರ ವರೆಗೆ ನಡೆಯಲಿದೆ ಎಂದು ದಿವ್ಯಾಂಗ ಮೈತ್ರಿ ಸ್ಪೋರ್ಟ್ಸ್ ಅಕಾಡೆಮಿಯ ಮುಖ್ಯಸ್ಥ ಹಾಗೂ ಇಂಡಿಯನ್ ಟೀಂ ಉಪ ನಾಯಕ ಶಿವಪ್ರಸಾದ್ ತಿಳಿಸಿದರು.
READ | ಹರ್ಷ ಹಿಂದೂ ಹತ್ಯೆ ಪ್ರಕರಣದ ತನಿಖೆ ನಡೆಸಲಿದೆ ಎನ್.ಐ.ಎ
ನಗರದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಳೆದ ಐದು ವರ್ಷಗಳಿಂದ ಅಕಾಡೆಮಿಯು ನಿರಂತರವಾಗಿ ವಿಶೇಷಚೇತನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿಕೊಂಡು ಬರುತ್ತಿದೆ. ಇದರ ಭಾಗವಾಗಿಯೇ ಪ್ರತಿ ಜಿಲ್ಲೆಯಲ್ಲೂ ಗಾಲಿ ಕುರ್ಚಿ ಕ್ರಿಕೆಟ್ ತಂಡ ರಚಿಸಲಾಗಿದೆ. ಈ ಎಲ್ಲ ಆಟಗಾರರಿಗೆ ಉಚಿತ ತರಬೇತಿ ಹಾಗೂ ಗಾಲಿ ಕುರ್ಚಿ ನೀಡಿ ಪ್ರೋತ್ಸಾಹಿಸುತ್ತಿದೆ. ಭದ್ರಾವತಿ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ಪಂದ್ಯಾವಳಿಗೆ ಶಾಸಕ ಬಿ.ಕೆ.ಸಂಗಮೇಶ್ವರ್ ಚಾಲನೆ ನೀಡುವರು ಎಂದು ಹೇಳಿದರು.
ಟೂರ್ನಿಯಲ್ಲಿ ಭಾಗವಹಿಸಲಿರುವ ತಂಡಗಳು
ತುಮಕೂರು ಟೈಗರ್ಸ್, ಬೆಳಗಾವಿ ಬುಲ್ಸ್, ಬೆಂಗಳೂರು ಈಗಲ್ಸ್, ಬೆಂಗಳೂರು ವಾರಿಯರ್ಸ್ ತಂಡಗಳು ಭಾಗವಹಿಸಲಿವೆ. ಅಂತರರಾಷ್ಟ್ರೀಯ ಮಟ್ಟದ ಗಾಲಿ ಕುರ್ಚಿ ಕ್ರಿಕೆಟ್ ಆಟಗಾರರಾದ ಶಿವಪ್ರಸಾದ್, ತಿಪ್ಪೇಸ್ವಾಮಿ, ಸಾಗರ್, ಹರೀಶ್ ಭಾಗವಹಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ 76108 95555, 90359 00923 ಸಂಪರ್ಕಿಸಬಹುದಾಗಿದೆ. ದಿಲೀಪ್, ಸಾಗರ್, ರಿಷಿ ಇದ್ದರು.
READ | ಶಿವಮೊಗ್ಗದ ಇಂದಿನ ಪ್ರಮುಖ ಸುದ್ದಿಗಳು, ಓದಲು ಕ್ಲಿಕ್ ಮಾಡಿ