ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಅಣ್ಣಾನಗರದಲ್ಲಿ ಮನೆಯ ಶೀಟ್ ತೆಗೆದು ಚಿನ್ನಾಭರಣ, ನಗದು ದೋಚಿರುವ ಘಟನೆ ಇತ್ತೀಚೆಗೆ ನಡೆದಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- READ | ವಿಷಜಂತು ಕಡಿದು ಗೃಹಿಣಿ ಸಾವು
ದಾದಾಪೀರ್ ಮನೆಯಲ್ಲಿ ಕಳ್ಳತನ ಮಾಡಲಾಗಿದ್ದು, ಅವರು ಸಂಬಂಧಿಕರ ಮನೆಗೆ ಹೋಗಿದ್ದಾಗ ಕೃತ್ಯ ಎಸಗಲಾಗಿದೆ. ಬೀರುನಲ್ಲಿದ್ದ 1.54 ಲಕ್ಷ ರೂ. ನಗದು, 50,000 ರೂ. ಮೌಲ್ಯದ ಚಿನ್ನಾಭರಣ, 6,000 ಮೌಲ್ಯದ ಬೆಳ್ಳಿ ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿದೆ.
ಮಗ ಮನೆಗೆ ಬಂದಾಗ ಗೊತ್ತಾಯ್ತು ಕಳ್ಳತನದ ವಿಚಾರ
ದಾದಾಪೀರ್ ಅವರ ಮಗನು ಮಾರನೇ ದಿನವೇ ಸಂಬಂಧಿಕರ ಮನೆಯಿಂದ ವಾಪಸ್ ಬಂದಿದ್ದಾನೆ. ಆಗ ಮನೆಯಲ್ಲಿ ಕಳ್ಳತನ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ತಕ್ಷಣ ಠಾಣೆಗೆ ದೂರು ನೀಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.