ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ವೃದ್ಧರೊಬ್ಬರ ಮೇಲೆ ಯುವಕ ಕುಪಿತಗೊಂಡು ಹಲ್ಕೆ ಮಾಡಿರುವ ಘಟನೆ ಟ್ಯಾಂಕ್ ಮೊಹಲ್ಲಾದಲ್ಲಿ ಇತ್ತೀಚೆಗೆ ನಡೆದಿದೆ.
ಟ್ಯಾಂಕ್ ಮೊಹಕ್ಕಾ ನಿವಾಸಿ ಸೈಯ್ಯದ್ ಬಷೀರ್ (65) ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ.
READ | ಪ್ರಧಾನಿ ನರೇಂದ್ರ ಮೋದಿ ‘ಪರೀಕ್ಷಾ ಪೆ ಚರ್ಚಾ’, ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ
ಬೈಕ್ ಸ್ಕ್ರ್ಯಾಚ್ ಮಾಡಿದ್ದಕ್ಕೆ ಹಲ್ಲೆ
ಟ್ಯಾಂಕ್ ಮೊಹಲ್ಲಾದ ಆರನೇ ಕ್ರಾಸ್ ನಲ್ಲಿ ಪ್ರಶಾಂತ್ ಎಂಬಾತ ಬೈಕ್ ನಿಲ್ಲಿಸಿದ್ದಾನೆ. ಆಗ ಬೈಕ್ ಪಕ್ಕವೇ ಬಷೀರ್ ಅವರು ತಮ್ಮ ಬೈಕ್ ತಂದು ನಿಲುಗಡೆ ಮಾಡಿದ್ದಾರೆ. ಪರಿಣಾಮ ಬೈಕ್ ಸ್ವಲ್ಪ ಸ್ಕ್ರ್ಯಾಚ್ ಆಗಿದೆ. ಕೋಪಗೊಂಡು ಪ್ರಶಾಂತ್ ಅವರು ಬಷೀರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.