ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಕಾರು ಮಾರಾಟ ಮಾಡುವುದಾಗಿ ನಂಬಿಸಿ ಹಂತ ಹಂತವಾಗಿ 1.75 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿರುವ ಘಟನೆ ನಡೆದಿದ್ದು, ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
READ| ಹೊಳೆಹೊನ್ನೂರು ಪೊಲೀಸರ ಭರ್ಜರಿ ದಾಳಿ, ಕಾರ್ ಕ್ಯಾಬಿನ್ ನಲ್ಲಿದ್ದ 18 ಲಕ್ಷ ರೂ. ಕದ್ದಿದ್ದ ಆರೋಪಿಗಳು ಅರೆಸ್ಟ್
ವಿನೋಬನಗರದ ವ್ಯಕ್ತಿಯೊಬ್ಬರು ಮೋಸ ಹೋಗಿದ್ದಾರೆ. ಇವರ ಕುಟುಂಬ ರಾಜಸ್ತಾನದಲ್ಲಿದ್ದು, ಹೋಗಿ ಬರುವುದಕ್ಕೆ ಕಾರಿನ ಅವಶ್ಯಕತೆ ಇದ್ದ ಕಾರಣಕ್ಕೆ ಸೆಕೆಂಡ್ ಹ್ಯಾಂಡ್ ಕಾರು ಹುಡುಕಾಟದಲ್ಲಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕಾರು ಮಾರಾಟದ ಬಗ್ಗೆ ಬರೆದಿರುವುದನ್ನು ಕಂಡು ಅವರಿಗೆ ಕರೆ ಮಾಡಿದ್ದಾರೆ. ಕಾರು ಮಾರಾಟ ಮಾಡಲಿರುವ ವ್ಯಕ್ತಿಯು ತಾನು ಬೆಂಗಳೂರಿನ ದೇವನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದು, ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಯಾಗಿದೆ. ಹೀಗಾಗಿ, ಎರಡು ದಿನಗಳ್ಲಲಿ ಅಲ್ಲಿಗೆ ಹೋಗಬೇಕಾಗಿದೆ. ಆದ್ದರಿಂದ ಕಾರನ್ನು ತುರ್ತಾಗಿ ಮಾರಾಟ ಮಾಡಬೇಕಾಗಿದೆ ಎಂದು ಹಿಂದಿಯಲ್ಲಿ ತಿಳಿಸಿದ್ದಾನೆ. ಶಿವಮೊಗ್ಗ ವಿಳಾಸ ಪಡೆದು ಚಾಲಕರ ಸಂಖ್ಯೆಯನ್ನು ನೀಡಲಾಗಿದೆ. ಆತನ ಸಂಖ್ಯೆಗೆ ಕರೆ ಮಾಡಲಾಗಿದ್ದು, ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
READ | ವಾಕಿಂಗ್ಗೆ ಬಂದ ವ್ಯಕ್ತಿಯ ಮೇಲೆ ಕಲ್ಲು ತೂರಾಟ ಮಾಡಿದ್ದ ಇಬ್ಬರ ಬಂಧನ, ಹಲ್ಲೆಯ ಕಾರಣ ಬಿಚ್ಚಿಟ್ಟ ಆರೋಪಿಗಳು
ಹಂತ ಹಂತವಾಗಿ ಲೂಟಿ
ಫೆಬ್ರವರಿ 25ರಂದು ಕರೆ ಮಾಡಿ ಗಾಡಿ ಹೊರಟಿದ್ದು 3,000 ರೂಪಾಯಿ ಕಳುಹಿಸುವಂತೆ ತಿಳಿಸಿದ್ದಾರೆ. ಮತ್ತೊಮ್ಮೆ ಕರೆ ಮಾಡಿ ವಾಹನ ಹೊರಟಿದ್ದು 16,810 ಹಣ ಕಳುಹಿಸಿ ಎಂದು ತಿಳಿಸಿದ್ದಾರೆ. ವಾಹನವು ತರೀಕರೆಯಲ್ಲಿದ್ದು ಹಣ ನೀಡುವಂತೆ ಹೇಳಿದ್ದು, 22,000, 21,500 ಹಾಗೂ 35,000 ರೂಪಾಯಿ ಕಳುಹಿಸಿದ್ದಾರೆ. ಹೀಗೆ ಹಂತ ಹಂತವಾಗಿ ಒಟ್ಟು 1.75 ಲಕ್ಷ ರೂ. ನೀಡಲಾಗಿದೆ. ಎಲ್ಲ ಹಣ ನೀಡಿದ ಬಳಿಕವೂ ಕಾರನ್ನು ಮಾತ್ರ ಕಳುಹಿಸಿಲ್ಲ. ವಿಚಾರಿಸಿದರೆ ವಾಹನ ವಾಪಸ್ ಬಂದ ಬಳಿಕ ಅದರ ಸ್ಥಿತಿ ನೋಡಿ ಹಣ ನೀಡುವುದಾಗಿ ತಿಳಿಸಿದ್ದಾರೆ. ನಂತರ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್ ಬುಕ್ ನೀಡಿದರೆ ಕಳುಹಿಸಿಕೊಡುವಂತೆ ಹೇಳಿದ್ದಾರೆ. ಅನುಮಾನಗೊಂಡು ದೂರು ನೀಡಿದ್ದಾರೆ.
https://www.suddikanaja.com/2021/12/21/online-fraud-by-a-accused-case-registered-in-shimoga-cyber-police-station/