ಸುದ್ದಿ ಕಣಜ.ಕಾಂ | CITY | FIRE ACCIDENT
ಶಿವಮೊಗ್ಗ: ಸೋಮಿನಕೊಪ್ಪ ಗ್ರಾಮದಲ್ಲಿ ಒಂದೆಡೆ ರಾಶಿ ಹಾಕಿದ್ದ ಸುಮಾರು 210 ಕ್ವಿಂಟಾಲ್ ಮೆಕ್ಕೆಜೋಳದ ರಾಶಿಗೆ ಬೆಂಕಿ ಬಿದ್ದು, ಸುಟ್ಟು ಭಸ್ಮವಾಗಿರುವ ಘಟನೆ ಭಾನುವಾರ ಮಧ್ಯಾಹ್ನ ಸಂಭವಿಸಿದೆ.
READ | ಬೆಂಕಿಗೆ ಆಹುತಿಯಾದ ಅರಣ್ಯ, ಎಕರೆಗಟ್ಟಲೇ ಮರಗಳು ಸುಟ್ಟು ಭಸ್ಮ
ರೈತ ಕುಮಾರಪ್ಪ, ನರಸಿಂಹಪ್ಪ, ಸರಸ್ವತಮ್ಮ ಎಂಬುವವರಿಗೆ ಸೇರಿದ ಮೆಕ್ಕೆಜೋಳ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ಮೌಲ್ಯದ ನಷ್ಟವಾಗಿದೆ. ಇವರು ರಾಶಿ ಹಾಕಿದ್ದ ಮೆಕ್ಕೆ ಜೋಳಕ್ಕೆ ಬೆಂಕಿ ಬಿದ್ದಿದೆ. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ಅವರು ಬಂದು ಬೆಂಕಿ ನಂದಿಸಿದ್ದಾರೆ. ಆದರೂ ಸಾಕಷ್ಟು ಪ್ರಮಾಣದ ಮೆಕ್ಕೆಜೋಳ ಸುಟ್ಟಿದೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಸಾಂತ್ವನ ನೀಡಿ ವೈಯಕ್ತಿಕ ಧನ ಸಹಾಯ ಮಾಡಿದರು.