ಸುದ್ದಿ ಕಣಜ.ಕಾಂ | TALUK | CRIME NEWS
ಸಾಗರ: ತಾಲೂಕಿನ ತಲವಾಟ ಗ್ರಾಮದ ವ್ಯಕ್ತಿಯೊಬ್ಬರು ಮನೆಯ ಹತ್ತಿರ ಖಾಲಿ ಜಾಗದಲ್ಲಿ ಒಣಗಿಹಾಕಿದ್ದ 21 ಕ್ವಿಂಟಾಲ್ ಅಡಿಕೆಯನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಾರ್ಚ್ 4ರಂದು ಪ್ರಕರಣದ 2ನೇ ಆರೋಪಿ ಭಟ್ಕಳದ ಉಸ್ಮಾನ್ ನಗರ ನಿವಾಸಿ ಫೈರೋಜ್ ಖಾನ್ (22) ಎಂಬಾತನನ್ನು ಬಂಧಿಸಲಾಗಿತ್ತು. ವಿಚಾರಣೆಯ ನಂತರ ಉಳಿದ ಆರೋಪಿಗಳಾದ ಉಸ್ಮಾನ್ ನಗರದ ಹಬೀಬ್ ಖಾನ್ ಅಲಿಯಾಸ್ ಅಪ್ಪು (24), ಭಟ್ಕಳದ ದೇವಿನಗರದ ಮಹಮ್ಮದ್ ಮರ್ದಾನ್ (21 ), ತಗ್ಗರ್ ಗೋಡ್ ನಿವಾಸಿ ರುಮಾನ್ (20) ಬಂಧಿಸಲಾಗಿದೆ.
READ | ಚಿನ್ನದ ಬೆಲೆ ದಿಢೀರ್ ಏರಿಕೆಗೆ ಟಾಪ್ 4 ಕಾರಣ, ಬಡವರ ಜೀವ ಹಿಂಡುತ್ತಿರುವ ಬಂಗಾರ
ಆರೋಪಿಗಳ ವಿರುದ್ಧ ನಾಲ್ಕು ಕೇಸ್
ಆರೋಪಿತರಿಂದ ಮೇಲ್ಕಂಡ ಪ್ರಕರಣವು ಸೇರಿದಂತೆ ಸಾಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ವರದಿಯಾದ ಒಟ್ಟು 4 ಅಡಿಕೆ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ಅಂದಾಜು ಮೌಲ್ಯ 47,000 ರೂಪಾಯಿ ಮೌಲ್ಯದ ಒಟ್ಟು 23 ಕ್ವಿಂಟಾಲ್ ಸಿಪ್ಪೆ ಗೋಟು ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ 1 ಬುಲೇರೋ ಪಿಕಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸಾಗರ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಶಿವಮೊಗ್ಗ ಉದ್ಯಮಿಗೆ ಥ್ರೆಟ್ ಕಾಲ್, ಭಟ್ಕಳದ ಮಹಿಳೆ ಅರೆಸ್ಟ್!