ಸುದ್ದಿ ಕಣಜ.ಕಾಂ | DISTRICT | MARIKAMBA JATRE
ಶಿವಮೊಗ್ಗ: ಕೋಟೆ ಶ್ರೀ ಮಾರಿಕಾಂಬ ಜಾತ್ರೆ ಪ್ರಯುಕ್ತ ನಗರದ ಗಾಂಧಿ ಬಜಾರ್ ನಲ್ಲಿ ಶುಕ್ರವಾರ ಚಪ್ಪರ ಪೂಜೆ ನೆರವೇರಿತು.
ಇದೇ ತಿಂಗಳಿ 22ರಿಂದ 26ರ ವರೆಗೆ ಜಾತ್ರೆ ನಡೆಯಲಿದ್ದು, ಈ ಹಿನ್ನೆಲೆ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬಂದಿರುವ ಚಪ್ಪರ ಪೂಜೆಯನ್ನು ಮಾಡಲಾಯಿತು.
ಕೋಟೆ ಮಾರಿಕಾಂಬ ಸಮಿತಿಯ ಎಸ್.ಕೆ. ಮರಿಯಪ್ಪ, ಉಮಾಪತಿ, ಮಂಜುನಾಥ್, ಚಂದ್ರಶೇಖರ್, ಸುನಿಲ್, ಪ್ರಭಾಕರ್, ರಾಮು, ರಘುವೀರ್ ಸಿಂಗ್, ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.
READ | ಸಹ್ಯಾದ್ರಿ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು, ವಾಂತಿ, ಆಸ್ಪತ್ರೆಗೆ ದಾಖಲು
ಕೋವಿಡ್ ಹಿನ್ನೆಲೆ ಮುಂದೂಡಲಾಗಿದ್ದ ಜಾತ್ರೆ
ಮಾರಿಕಾಂಬ ಜಾತ್ರೆಯನ್ನು ಫೆಬ್ರವರಿ ತಿಂಗಳಿನಲ್ಲೇ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಕೋವಿಡ್ ಸೋಂಕು ವ್ಯಾಪಕವಾಗಿ ಹರಡಿದ್ದರಿಂದ ಜಾತ್ರೆಯನ್ನು ಮುಂದೂಡಲಾಗಿತ್ತು.
ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಗೆ ಗಾಂಧಿ ಬಜಾರ್ ನಲ್ಲಿ ಅಮ್ಮನವರ ಪೂಜೆ ನಡೆಯಲಿದೆ. ಅದೇ ದಿನ ರಾತ್ರಿ ಗಾಂಧಿ ಬಜಾರ್ ನಿಂದ ಉತ್ಸವದೊಂದಿಗೆ ಮಾರಿಕಾಂಬ ಗದ್ದುಗೆ ಪ್ರವೇಶಿಸಲಿದೆ.
ಮಾರ್ಚ್ 23 ರಿಂದ 26ರ ವರೆಗೆ ಪ್ರತಿದಿನ ಬೆಳಗ್ಗೆ 7 ರಿಂದ ಹರಕೆ, ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ. 25ರ ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ, 26 ರಂದು ರಾತ್ರಿ ಅಮ್ಮನವರ ರಾಜಬೀದಿ ಉತ್ಸವದೊಂದಿಗೆ ವನಪ್ರವೇಶ ನಡೆದು ಜಾತ್ರೆ ಸಂಪನ್ನಗೊಳ್ಳಲಿದೆ.
https://www.suddikanaja.com/2022/01/19/shivamogga-kote-shree-marikamba-jatre-date-fixed/