ಸುದ್ದಿ ಕಣಜ.ಕಾಂ | CITY | RAIN FALL
ಶಿವಮೊಗ್ಗ: ನಗರದ ಹಲವೆಡೆ ಶನಿವಾರ ಸಂಜೆ ದಿಢೀರ್ ಮಳೆಯಾಗಿದ್ದು, ಧಗೆಯಿಂದ ಬಸವಳಿದವರಿಗೆ ತಣ್ಣನೆಯ ವಾತಾವರಣದ ಅನುಭವವಾಗುತ್ತಿದೆ.
ಇತ್ತೀಚೆಗಷ್ಟೇ ಜಿಲ್ಲೆಯ ವಿವಿಧೆಡೆ ಭಾರಿ ಮಳೆಯಾಗಿ ಅನಾಹುತವನ್ನೇ ಸೃಷ್ಟಿಸಿತ್ತು. ಆದರೆ, ನಗರದಲ್ಲಿ ಅಷ್ಟೊಂದು ಮಳೆಯಾಗಿರಲಿಲ್ಲ. ಇಂದು ಸಂಜೆಯ ನಂತರ ಮಳೆ ಸುರಿದಿದೆ. ಮಧ್ಯಾಹ್ನದವರೆಗೆ ಧಗೆ ಮತ್ತು ಆದ್ರ್ರತೆ ಇತ್ತು. ಸಂಜೆಯ ಮಳೆ ಬಿಸಿಲಿನ ಅನುಭವವನ್ನೇ ಇಲ್ಲವಾಗಿಸಿದೆ.