ಸುದ್ದಿ ಕಣಜ.ಕಾಂ | DISTRICT | LOK ADALAT
ಶಿವಮೊಗ್ಗ: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 70 ಲಕ್ಷ ರೂಪಾಯಿ ಪರಿಹಾರವನ್ನು ಸೊರಬ ನ್ಯಾಯಾಲಯದಲ್ಲಿ ಮೂಲಕ ಒದಗಿಸಲಾಗಿದೆ.
READ | ಮಲ್ಲಿಗೇನಹಳ್ಳಿಯಲ್ಲಿ ಭವಿಷ್ಯ ನಿಧಿ ಭವನ ಲೋಕಾರ್ಪಣೆ, ಏನೇನು ಸೌಲಭ್ಯ ಲಭ್ಯ?
2019ರ ಏಪ್ರಿಲ್ 16ರಂದು ಅಪಘಾತದಲ್ಲಿ ಮೃತ ಪಟ್ಟ ವ್ಯಕ್ತಿಯ ಕುಟುಂಬಕ್ಕೆ ನ್ಯೂ ಇಂಡಿಯ ಇನ್ಶೂರೆನ್ಸ್ ಕಂಪನಿ ಮೂಲಕ 70 ಲಕ್ಷ ರೂ. ಪರಿಹಾರವನ್ನ ಸೊರಬ ನ್ಯಾಯಾಲಯ ಒದಗಿಸಿದೆ.
ರಾಷ್ಟ್ರೀಯ ಲೋಕ್ ಆದಾಲತ್ ಮೂಲಕ ಜನ ಸಾಮಾನ್ಯರ ಪ್ರಕರಣಗಳನ್ನು ಬಗೆಹರಿಸಿ ಸೂಕ್ತ ಪರಿಹಾರ ನೀಡಲು ಸರ್ಕಾರ 818 ಕೋಟಿ ರೂ. ಬಿಡುಗಡೆ ಮಾಡಿದ್ದು, ರಾಜೀ ಆಗಬಹುದಾದಂತಹ ವ್ಯಾಜ್ಯಗಳನ್ನು ಶೀಘ್ರವಾಗಿ ಪರಿಹರಿಸಿ ಹೆಚ್ಚಿನ ಗುರಿ ಸಾಧಿಸಲು ವಕೀಲರು ಕೂಡ ಗಮನಹರಿಸಬೇಕು.
– ಎಸ್.ಎ.ಮುಸ್ತಫಾ ಹುಸೇನ್, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ
ವಕೀಲರ ಸಂಘದ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ಲೋಕ ಅದಾಲತ್ ಮೂಲಕ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಶೀಘ್ರವಾಗಿ ಬಗೆಹರಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 28 ವರ್ಷದ ಜೂನಿಯರ್ ಎಂಜಿನಿಯರ್ ತಿಪ್ಪೇಸ್ವಾಮಿ ಎಂಬ ಯುವಕ 2019ರ ನವೆಂಬರ್ 20ರಂದು ಬೆಂಗಳೂರಿನಲ್ಲಿ ಬೈಕ್ ಮತ್ತು ಲಾರಿಗಳ ನಡುವೆ ಅಪಘಾತ ಸಂಭವಿಸಿ ಮೃತಪಟ್ಟಿದ್ದು ಅವರ ಕುಂಟುಂಬಕ್ಕೆ ನ್ಯೂ ಇಂಡಿಯಾ ಇನ್ಶೂರೆನ್ಸ್ ಕಂಪನಿಯು 25 ಲಕ್ಷ ರೂ. ಚೆಕ್ ವಿತರಿಸಿತು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸರಸ್ವತಿಕೆ.ಎನ್, ಹಿರಿಯ ನ್ಯಾಯಾಧೀಶರು, ಕಿರಿಯ ನ್ಯಾಯದೀಶರು, ವಕೀಲರು ಸೇರಿದಂತೆ ಮತ್ತಿತರರು ಹಾಜರಿದ್ದರು.
READ | TODAY GOLD, SILVER RATE, ಚಿನ್ನ, ಬೆಳ್ಳಿಯ ಬೆಲೆ ಮತ್ತೆ ಏರಿಕೆ
12,287 ಪ್ರಕರಣಗಳ ಸಂಧಾನ
ಶನಿವಾರದಂದು ನಡೆದ ಲೋಕ ಅದಾಲತ್ ನಲ್ಲಿ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿ ಬಾಕಿ ಇದ್ದ ವಿವಿಧ ಸ್ವರೂಪದ 12,287 ಪ್ರಕರಣ ಹಾಗೂ 241 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 12,528 ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸುವ ಮೂಲಕ ಇತ್ಯರ್ಥಪಡಿಸಲಾಯಿತು.
ಪ್ರಕರಣಗಳನ್ನು ರಾಜೀ ಮಾಡಿಸಲು ಶಿವಮೊಗ್ಗದಲ್ಲಿ 15 ಪೀಠಗಳು, ಭದ್ರಾವತಿಯಲ್ಲಿ 7, ಹೊಸನಗರದಲ್ಲಿ 2, ಸಾಗರದಲ್ಲಿ 4, ಶಿಕಾರಿಪುರದಲ್ಲಿ 4, ಸೊರಬದಲ್ಲಿ 3 ಹಾಗೂ ತೀರ್ಥಹಳ್ಳಿಯಲ್ಲಿ 4 ಪೀಠಗಳನ್ನು ರಚಿಸಲಾಗಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಫಾ ಹುಸೇನ್ ಎಸ್.ಎ ಇವರ ಮಾರ್ಗದರ್ಶನದಲ್ಲಿ ರಾಜೀ ಸಂಧಾನ ಮಾಡಲಾಯಿತು.
https://www.suddikanaja.com/2020/12/16/lok-adalat-in-shivamogga/