ಸುದ್ದಿ ಕಣಜ.ಕಾಂ | TALUK | KUDLI JATRE
ಶಿವಮೊಗ್ಗ: ತುಂಗ ಭದ್ರಾ ನದಿಗಳ ಸಂಗಮ ಕ್ಷೇತ್ರವಾದ ಕೂಡ್ಲಿಯಲ್ಲಿ ಶ್ರೀ ಸಂಗಮೇಶ್ವರ ಸ್ವಾಮಿ ಜಾತ್ರೆ ಮಹೋತ್ಸವ ಅತ್ಯಂತ ಸಂಭ್ರಮದಿಂದ ನಡೆಯುತ್ತಿದೆ.
ಯುಗಾದಿ ಹಬ್ಬದಂದು ಆರಂಭವಾಗುವ ಜಾತ್ರೆಯು ಮೂರು ದಿನಗಳ ಕಾಲ ಇಲ್ಲಿ ನಡೆಯುತ್ತದೆ. ಇದಕ್ಕೆ ಸಾವಿರಾರು ಭಕ್ತರು ಆಗಮಿಸಿ ಕೂಡ್ಲಿಯಲ್ಲಿ ಪುಣ್ಯ ಸ್ನಾನ ಮಾಡಿ ದೇವರ ದರ್ಶನ ಪಡೆದು ಪುನಿತರಾಗುತ್ತಾರೆ.
ಇಂದು ನಡೆಯಲಿದೆ ರಥೋತ್ಸವ
ನಿನ್ನೆಯಿಂದ ಆರಂಭಗೊಂಡಿರುವ ಜಾತ್ರೆಯಲ್ಲಿ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸುತಿದ್ದಾರೆ. ಭಾನುವಾರ ರಥೋತ್ಸವ ನಡೆಯಲಿದ್ದು, ಅಕ್ಕಪಕ್ಕ ಹಳ್ಳಿಯ ಜನರು ಆಗಮಿಸಲಿದ್ದಾರೆ.
ಊರ ದೇವರುಗಳ ಮೂರ್ತಿಯನ್ನು ಪಲ್ಲಕ್ಕಿಯನ್ನು ತಂದು ಕೂಡ್ಲಿಯಲ್ಲಿ ಸ್ವಚ್ಚಗೊಳಿಸುವ ಪ್ರತೀತಿ ಹಿಂದಿನಿಂದಲೂ ಆಚರಣೆಯಲ್ಲಿದೆ.
ಭಾನುವಾರವಾಗಿರುವುದರಿಂದ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಕೂಡ್ಲಿ ಪುಣ್ಯಕ್ಷೇತ್ರಕ್ಕೆ ಆಗಮಿಸಿದ್ದು, ಅದ್ಧೂರಿ ರಥೋತ್ಸವ ನಡೆಯಲಿದೆ. ಈ ರಥೋತ್ಸವದಲ್ಲಿ ನೂರಕ್ಕೂ ಅಧಿಕ ಗ್ರಾಮ ದೇವತೆಗಳು ಭಾಗವಹಿಸುವುದು ವಿಶೇಷ. ಶ್ರೀ ಸಂಗಮೇಶ್ವರ ಸ್ವಾಮಿಗಳ ರಥೋತ್ಸವಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಾತ್ರೆಗೆ ಶಿವಮೊಗ್ಗ ಸೇರಿದಂತೆ ನೆರೆಯ ಜಿಲ್ಲೆ ದಾವಣಗೆರೆ ಹಾಗೂ ಬೆಂಗಳೂರಿನಿಂದಲೂ ಸಾಕಷ್ಟು ಜನ ಭಕ್ತರು ಆಗಮಿಸುತ್ತಾರೆ.