ಸುದ್ದಿ ಕಣಜ.ಕಾಂ | KARNATAKA | DySP TRANSFER
ಶಿವಮೊಗ್ಗ: ಶಿವಮೊಗ್ಗಕ್ಕೆ ನೂತನ ಡಿವೈಎಸ್ಪಿ ಆಗಿ ಬಾಲರಾಜ್ ಅವರನ್ನು ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ಒಂದು ವರ್ಷದಿಂದ ಶಿವಮೊಗ್ಗ ಉಪ ವಿಭಾಗದ ಡಿವೈಎಸ್ಪಿ ಆಗಿ ಕಾರ್ಯನಿರ್ವಹಿಸಿದ ಪ್ರಶಾಂತ್ ಮುನ್ನೋಳಿ ಅವರು ಚಿತ್ರದುರ್ಗ ಡಿಸಿಆರ್.ಬಿಗೆ ವರ್ಗಾವಣೆಗೊಂಡಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ತೀರ್ಥಹಳ್ಳಿಯಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಆಗಿದ್ದ ಬಾಲರಾಜ್ ಅವರು ತಮ್ಮ ಕಾರ್ಯವೈಖರಿಯ ಮೂಲಕ ಜನಮೆಚ್ಚುಗೆ ಪಡೆದಿದ್ದರು. ಪೊಲೀಸ್ ಇಲಾಖೆಯಲ್ಲೂ ಖಡಕ್ ಆಫಿಸರ್ ಎಂಬ ಹೆಸರು ಗಳಿಸಿದ್ದರು.
READ | ನ್ಯೂಮಂಡ್ಲಿ ಬಳಿ ಯುವಕನ ಮೇಲೆ ಅನ್ಯಕೋಮಿನವರಿಂದ ಹಲ್ಲೆ
ಬಾಲರಾಜ್ ಅವರ ವಿಶೇಷತೆಗಳೇನು?
- ತಮಿಳುಕುಮಾರ, ಹೆಬ್ಬೆಟ್ ಮಂಜ, ಕಮ್ಮರಡಿ ಹನೀಫ್ ಅವರಂತಹ ರೌಡಿಗಳಿಗೆ ಸಿಂಹ ಸ್ವಪ್ನವಾಗಿ ಕಾಡಿದವರೇ ಈ ಬಾಲರಾಜ್.
- ಬಾಲರಾಜ್ ಅವರು ತೀರ್ಥಹಳ್ಳಿಯಲ್ಲಿ ಇನ್ ಸ್ಪೆಕ್ಟರ್ ಆಗಿದ್ದ ಅವಧಿಯಲ್ಲಿಯೇ ನಕ್ಸಲ್ ಚಟುವಟಿಕೆಗಳನ್ನು ಹೆಡೆಮುರಿ ಕಟ್ಟಲು ಯಶಸ್ವಿಯಾಗಿದ್ದರು.
- ತೀರ್ಥಹಳ್ಳಿಯಲ್ಲಿ ಕಾರ್ಯನಿರ್ವಹಿಸಿ ಅಲ್ಲಿಂದ ಸಿಸಿಬಿ, ಸಿಒಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಮೂಲಕ ಹೆಸರು ಗಳಿಸಿದ್ದಾರೆ.
- ಜ್ಞಾನಭಾರತಿ ರೇಪ್ ಕೇಸ್, ಹೊಸಹಳ್ಳಿ ವೆಂಕಟೇಶ್ ಮರ್ಡರ್ ಕೇಸ್ ಗಳನ್ನು ಬೇಧಿಸಿದ್ದರು.