ಸುದ್ದಿ ಕಣಜ.ಕಾಂ |CITY | CRIME NEWS
ಶಿವಮೊಗ್ಗ: ಉದ್ಯಮಿಯೊಬ್ಬರ ಬ್ಯಾಂಕ್ ಖಾತೆಯಿಂದ 99,999 ರೂಪಾಯಿ ದೋಚಿರುವ ಘಟನೆ ನಡೆದಿದ್ದು, ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಊರುಗಡೂರು ನಿವಾಸಿ ನಾಗರಾಜ್ ಎಂಬುವವರ ಖಾತೆಯಿಂದ ಹಣವನ್ನು ಬೇರೊಂದು ಖಾತೆಗೆ ವರ್ಗಾವಣೆ ಮಾಡಲಾಗಿದೆ.
READ | ಹೊಸಮನೆಯಲ್ಲಿ ಓಮ್ನಿ ಕಳ್ಳತನ
ಮೋಸ ಮಾಡಿದ್ದು ಹೇಗೆ?
ಬ್ಯಾಂಕ್ ಕಸ್ಟಮರ್ ಕೇರ್ ಎಂದು ಹೇಳಿಕೊಂಡು ಕರೆ ಮಾಡಿದ್ದು, ಖಾತೆಯ ಕೆವೈಸಿ ಬ್ಲಾಕ್ ಆಗಿರುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ, ಓಟಿಪಿ ಕಳುಹಿಸಿದ್ದು ಅದನ್ನು ತಿಳಿಸುವಂತೆ ಹೇಳಿದ್ದಾರೆ. ಅದನ್ನು ನಂಬಿದ ಉದ್ಯಮಿ ಓಟಿಪಿ ನೀಡಿದ್ದಾರೆ. ಕ್ಷಣಾರ್ಧದಲ್ಲೇ ಖಾತೆಯಿಂದ ಹಣ ದೋಚಲಾಗಿದೆ. ತನಿಖೆ ನಡೆಯುತ್ತಿದೆ.