ಸುದ್ದಿ ಕಣಜ.ಕಾಂ | TALUK |CRIME NEWS
ಸೊರಬ: ತಾಲೂಕಿನ ಆನವಟ್ಟಿ ಬಳಿಯ ಎಣ್ಣೆಕೊಪ್ಪ ಗ್ರಾಮದಲ್ಲಿ ಮಾಲೀಕನ ಪ್ರಾಣವನ್ನು ಶ್ವಾನಗಳು ಕಾಪಾಡಿದ ಘಟನೆ ನಡೆದಿದೆ. ಎಣ್ಣೆಕೊಪ್ಪ ಗ್ರಾಮದ ಗೊಲ್ಲರ ತಾಂಡಾ ನಿವಾಸಿ ಬಂಗಾರಪ್ಪ ಎಂಬುವವರನ್ನು ಸಾಕು ನಾಯಿಗಳು ರಕ್ಷಣೆ ಮಾಡಿವೆ.
READ | ಹತ್ಯೆಯಾದ ಹರ್ಷನ ಹೆಸರಿನಲ್ಲಿ ‘ಹರ್ಷ ಚಾರಿಟೆಬಲ್ಟ್ರಸ್ಟ್’ ಆರಂಭ, ಇದರ ಉದ್ದೇಶವೇನು?
ನಡೆದಿದ್ದೇನು?
ಬಂಗಾರಪ್ಪ ಅವರು ಕಾಡಿಗೆ ಕಟ್ಟಿಗೆ ತರಲು ತೆರಳಿದ್ದಾರೆ. ಅವರ ಜತೆಯಲ್ಲಿ ಸಾಕುನಾಯಿಗಳು ಹೋಗಿವೆ. ಈ ವೇಳೆ ಚಿರತೆ ದಾಳಿ ನಡೆಸಿದೆ. ಪರಿಣಾಮ ಅವರ ಕೈ ಮತ್ತು ಕಾಲಿಗೆ ಗಾಯವಾಗಿದೆ.
ಮಾಲೀಕನ ಜೀವ ಕಾಪಾಡಿದ ಶ್ವಾನ
ಚಿರತೆ ದಾಳಿ ಮಾಡಿದ್ದೇ ಅಲ್ಲಿಯೇ ಇದ್ದ ಶ್ವಾನಗಳು ಪ್ರತಿ ದಾಳಿಗೆ ಮುಂದಾಗಿವೆ. ಪರಸ್ಪರ ಕೆಲಹೊತ್ತು ಕಾಳಗವೂ ಆಗಿದೆ. ನಂತರ ಚಿರತೆಯನ್ನು ಅಲ್ಲಿಂದ ಓಡಿಸಿ ಮಾಲೀಕನ ಪ್ರಾಣವನ್ನು ನಾಯಿಗಳು ಕಾಪಾಡಿವೆ. ಗಾಯಗೊಂಡಿರುವ ಬಂಗಾರಪ್ಪ ಅವರನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.