ಸುದ್ದಿ ಕಣಜ.ಕಾಂ | DISTRICT | POLITICAL NEWS
ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಗುತ್ತಿಗೆದಾರನಿಂದ 40 ಪಸೆರ್ಂಟ್ ಕಮಿಷನ್ ಗೆ ಬೇಡಿಕೆ ಇಟ್ಟ ಆರೋಪ ಕೇಳಿಬಂದಿದ್ದು, ಈ ಕಾರಣಕ್ಕೆ ಅವರದ್ದೇ ಪಕ್ಷದ ಮುಖಂಡ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣವಾಗಿರುವುದನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ತೀವ್ರವಾಗಿ ಖಂಡಿಸಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಬಿಜೆಪಿಯ ಮುಖಂಡರಾಗಿದ್ದು, ಕೆಲ ದಿನಗಳ ಹಿಂದೆಯೇ ಕೆ.ಎಸ್.ಈಶ್ವರಪ್ಪ ಅವರು ಗುತ್ತಿಗೆ ಬಿಲ್ ಪಾಸ್ ಮಾಡಲು 40 ಪಸೆರ್ಂಟ್ ಕೇಳುತ್ತಿದ್ದಾರೆ ಎಂದು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದರು. ಈ ಸಂದರ್ಭದಲ್ಲೇ ಬಿಜೆಪಿ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ತನಿಖೆ ನಡೆಸಿದ್ದರೆ ಸಂತೋಷ್ ಆತ್ಮಹತ್ಯೆಯಾಗುತ್ತಿರಲಿಲ್ಲ ಎಂದು ಟೀಕಿಸಿದ್ದಾರೆ.
READ | ತಂಗಿಗೆ ಮಡಿಲಕ್ಕಿ ಕೊಟ್ಟು ಮೃತಪಟ್ಟ ಅಣ್ಣ
ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿ
ಗುತ್ತಿಗೆದಾರ ಸಂತೋಷ್ ಪಾಟೀಲ್ ತಮ್ಮ ಸಾವಿಗೆ ಈಶ್ವರಪ್ಪ ಅವರೇ ನೇರ ಕಾರಣ ಎಂದು ವಾಟ್ಸಪ್ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಗಾಗಿ ಕೂಡಲೇ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಈಶ್ವರಪ್ಪ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಸಂತೋಷ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು.
ಸಂತೋಷ್ ಪಾಟೀಲ್ ಬಿಜೆಪಿಯ ಮುಖಂಡರಾಗಿದ್ದರೂ ಅವರಿಂದಲೇ 40 ಪಸೆರ್ಂಟ್ ಕಮಿಷನ್ ಪಡೆಯುತ್ತಾರೆಂದರೆ, ಬೇರೆ ಪಕ್ಷದ ಕಾರ್ಯಕರ್ತರು ಅಥವಾ ಸಾಮಾನ್ಯ ಗುತ್ತಿಗೆದಾರರ ಪಾಡೇನು? ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಇನ್ನಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಮುಖರಾದ ಮಧುಸೂದನ್, ಚೇತನ್, ಮಹಮ್ಮದ್ ನಿಹಾಲ್, ಮೋಹನ್ ಗಿರೀಶ್ ಅಬ್ದುಲ್ ಅಕ್ಬರ್, ಚರಣ್, ವಿಜಯ ಕುಮಾರ್, ರವಿ, ಶಿವು, ಚಂದ್ರೋಜಿರಾವ್, ಗಿರೀಶ್, ಆಕಾಶ್, ವಿಕ್ರಮ್ ಮಂಜು, ಕಿರಣ್ ಸುಮನ್À ಉಪಸ್ಥಿತರಿದ್ದರು.