ಸುದ್ದಿ ಕಣಜ.ಕಾಂ | DISTRICT | JOB JUNCTION
ಶಿವಮೊಗ್ಗ: ಜಿಲ್ಲೆಯಲ್ಲಿ ಐಟಿಐ ತೇರ್ಗಡೆಯಾದವರಿಗೆ ಉತ್ತಮ ಅವಕಾಶ ಲಭಿಸಲಿದೆ. ಗಾಜನೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯು ಏಪ್ರಿಲ್ 21ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಮಟ್ಟದ ಅಪ್ರೆಂಟಿಸ್ ಮೇಳವನ್ನು ಗಾಜನೂರಿನ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಭದ್ರಾವತಿ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಕಾಳಿದಾಸ ನಾಯ್ಕ್, ಐಟಿಐ ಮುಗಿದ ನಂತರ ಉದ್ಯೋಗಾಕಾಂಕ್ಷಿಗಳು ಅಪ್ರೆಂಟಿಸ್ ಅಗತ್ಯವಿರುತ್ತದೆ. ಅದಕ್ಕೆ ಈ ಮೇಳ ಸಹಕಾರಿಯಾಗಲಿದೆ ಎಂದು ತಿಳಿಸಿದರು.
READ | ಐಟಿಐ ಪಾಸ್ ಆದವರಿಗೆ ಎಚ್ಎಎಲ್ನಲ್ಲಿ 1,060 ಹುದ್ದೆಗಳಿಗೆ ಅಪ್ರೆಂಟಿಸ್ ತರಬೇತಿ, ಕೂಡಲೇ ಅರ್ಜಿ ಸಲ್ಲಿಸಿ
ಯಾರೆಲ್ಲ ಪಾಲ್ಗೊಳ್ಳಬಹುದು?
ಜಿಲ್ಲೆಯಲ್ಲಿ 9 ಸರ್ಕಾರಿ, 6 ಅನುದಾನಿತ ಹಾಗೂ 29 ಖಾಸಗಿ ಐಟಿಐ ಕಾಲೇಜುಗಳಿವೆ. ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮಾರ್ಗದರ್ಶನದಲ್ಲಿ ಈ ಮೇಳ ನಡೆಯಲಿದೆ. ಐಟಿಐನಲ್ಲಿ ಉತ್ತೀರ್ಣರಾದ ಹಾಗೂ ಅಂತಿಮ ವರ್ಷದ ತರಬೇತಿದಾರರು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ.
ಯಾವೆಲ್ಲ ಕಂಪನಿಗಳು ಬರಲಿವೆ?
ಟೊಯೋಟಾ, ಎಸ್ಜಿಕೆ, ಫಫ್ಟೆಕ್ಟ್ ಅಲೈ, ವಿಟೇಕ್ ಸೇರಿ 45ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸಲಿವೆ. ಐಟಿಐ ಮುಗಿಸಿದ ವಿದ್ಯಾರ್ಥಿಗಳು ಒಂದು ವರ್ಷದ ಎಟಿಎಸ್ ಕೋರ್ಸ್ ಅನ್ನು ಈ ಕಂಪನಿಗಳಲ್ಲಿ ಪಡೆಯಬಹುದಾಗಿದೆ. ತರಬೇತಿ ಪಡೆದ ಎಲ್ಲರಿಗೂ ಎನ್.ಸಿವಿಟಿ ಪ್ರಮಾಣ ಪತ್ರ ನೀಡಲಾಗುವುದು. ಈ ಪ್ರಮಾಣ ಪತ್ರದ ಆಧಾರದಲ್ಲಿ ರಾಷ್ಟ್ರವ್ಯಾಪಿ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಜಿಲ್ಲೆಯ ಎಲ್ಲ ಐಟಿಐ ಉತ್ತೀರ್ಣರಾದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು.
ಉಸ್ತುವಾರಿ ಸಚಿವರಿಂದ ಚಾಲನೆ
ಜಿಲ್ಲಾ ಉಸ್ತುವಾರಿ ಕೆ.ಸಿ.ನಾರಾಯಣಗೌಡ ಅವರು ಮೇಳಕ್ಕೆ ಚಾಲನೆ ನೀಡುವರು.ಗೃಹ ಸಚಿವ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅತಿಥಿಗಳಾಗಿ ಬರಲಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿ ಗಾಜನೂರು ಐಟಿಐ ಕಾಲೇಜಿನ ಪ್ರಾಚಾರ್ಯ ಬಿ.ಟಿ.ಶೇಖರಪ್ಪ, ಜೆಟಿಓಗಳಾದ ಚಂದ್ರಪ್ಪ, ಸದಾನಂದ್ ಇದ್ದರು.
READ | ಎನ್ಪಿಸಿಐಎಲ್ನಲ್ಲಿ 225 ಹುದ್ದೆಗಳ ನೇಮಕಾತಿ, ಕೂಡಲೇ ಅರ್ಜಿ ಸಲ್ಲಿಸಿ