ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರ ಜಿಲ್ಲೆಯ ವ್ಯಕ್ತಿಯೊಬ್ಬರು 48 ಟನ್ 213 ಕೆಜಿ ಗುಜುರಿ ಸಾಮಗ್ರಿಗಳನ್ನು ಪಡೆದು ಯಾವುದೇ ರೀತಿಯ ಹಣ ನೀಡದೇ ಮೋಸ ಮಾಡಿರುವುದಾಗಿ ಆರೋಪಿಸಿ ಶಿವಮೊಗ್ಗ ಎಸ್.ಇ.ಎನ್. ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೊಲ್ಲಾಪುರದ ವಿನಾಯಕ್ ಅನಿಲ್ ಸಿಂಧೆ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
READ | ಕರ್ತವ್ಯ ಪ್ರಜ್ಞೆ ಮೆರೆದ ಶಿವಮೊಗ್ಗ ರೈಲ್ವೆ ಪೊಲೀಸ್
ಘಟನೆ ನಡೆದಿದ್ದು ಹೇಗೆ?
ನ್ಯೂಮಂಡ್ಲಿ ಸಿದ್ದೇಶ್ವರ ಗೋಡೌನ್ ನಲ್ಲಿ ಸ್ವಸ್ತಿಕ್ ಮೆಟಲ್ ಎಂಬ ಅಂಗಡಿಯವರು ಕಳೆದ ಮೂರು ವರ್ಷಗಳಿಂದ ಪಾತ್ರೆ ಮತ್ತು ಗುಜುರಿ ವ್ಯಾಪಾರ ಮಾಡಿಕೊಂಡಿದ್ದಾರೆ. ಸಂಗ್ರಹಿಸಿದ ಗುಜುರಿ ಸಾಮಗ್ರಿಯನ್ನು ವಿನಾಯಕ್ ಅನಿಲ್ ಸಿಂಧೆ ಅವರು ಆಗಾಗ ತೆಗೆದುಕೊಂಡು ಹೋಗುತ್ತಿದ್ದರು.
ಎಂದಿನಂತೆ, ಮಾರ್ಚ್ 15ರಂದು ವಿನಾಯಕ್ ಅನಿಲ್ ಸಿಂಧೆ ಅವರು ಖುದ್ದು ಶಿವಮೊಗ್ಗದಲ್ಲಿರುವ ಗುಜುರಿ ಅಂಗಡಿಗೆ ಭೇಟಿ ನೀಡಿದ್ದು, ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ, ಪ್ಲಾಸ್ಟಿಕ್ ಬ್ಯಾಟರಿ ಗುಜುರಿ ಸಾಮಗ್ರಿಗಳನ್ನು ಒಪ್ಪಂದ ಮಾಡಿಕೊಂಡು ನಾಲ್ಕು ಲೋಡ್ ನಷ್ಟು ಮುಂಗಡ ಹಣ ನೀಡದೇ ಸಾಗಿಸಿ ತೆಗೆದುಕೊಂಡು ಹೋಗಿದ್ದರು. ಎಸ್.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.