ಸುದ್ದಿ ಕಣಜ.ಕಾಂ | KARNATAKA | POLITICAL NEWS
ಶಿವಮೊಗ್ಗ: ರಾಜ್ಯದ ವಿವಿಧೆಡೆ ಸಾಗುತ್ತ ಬಂದಿರುವ ಜೆಡಿಎಸ್ ನ ‘ಜನತಾ ಜಲಧಾರೆ ಸಂಕಲ್ಪ ರಥಯಾತ್ರೆ’ಯು ಏಪ್ರಿಲ್ 22ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ತಲುಪಲಿದೆ ಎಂದು ಜೆಡಿಎಸ್ ಮುಖಂಡ ಕಾಂತರಾಜ್ ಹೇಳಿದರು.
ಮಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗೃತಿ ಸಮಾವೇಶವು ಚಿಕ್ಕಕೂಡ್ಲಿ ಗ್ರಾಮದಲ್ಲಿ ನಡೆಯಲಿದೆ. ಜನತಾ ಜಲಧಾರೆ ಸಂಕಲ್ಪ ರಥಯಾತ್ರೆ ಜೆಡಿಎಸ್ ನ ಕನಸಿನ ಕಾರ್ಯಕ್ರಮವಾಗಿದೆ. ರಾಜ್ಯದ ನದಿಗಳಲ್ಲಿ ದೊರೆಯುವ ನೀರನ್ನು ಸದ್ಬಳಕೆ ಮಾಡಿಕೊಂಡು, ಕರ್ನಾಟಕದ ಜನತೆಗೆ ನೀಡಬೇಕೆನ್ನುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದರು.
READ | ಕರ್ತವ್ಯ ಪ್ರಜ್ಞೆ ಮೆರೆದ ಶಿವಮೊಗ್ಗ ರೈಲ್ವೆ ಪೊಲೀಸ್
ಜಾಗೃತಿಗಾಗಿ ಸಂಕಲ್ಪ ಯಾತ್ರೆ, 94 ನದಿಗಳಿಂದ ಜಲ ಸಂಗ್ರಹ
ಯೋಜನೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸಂಕಲ್ಪಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದೆ. ಯಾತ್ರೆಯ ಮೂಲಕ ರಾಜ್ಯದ ಪ್ರಮುಖ ನದಿಗಳಿಂದ 94 ಸ್ಥಳಗಳಲ್ಲಿ ಜಲಸಂಗ್ರಹ ಮಾಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಗೆ ಬರುವ ತುಂಗಭದ್ರ ನದಿಗಳ ಸಂಗಮ ಕ್ಷೇತ್ರ ಕೂಡ್ಲಿಯಲ್ಲಿ ಜಲಸಂಗ್ರಹಣೆ ಮಾಡಲಾಗುವುದು. ಬೃಹತ್ ಬಹಿರಂಗ ಸಭೆಯನ್ನು ಏರ್ಪಡಿಸಲಾಗುವುದು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಹಾಗೂ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ಸತ್ಯನಾರಾಯಣ ರಾಜ್ (ಸತೀಶ್), ಪ್ರಮುಖರಾದ ಆನವೇರಿ ದಾನೇಶಪ್ಪ, ಮಡಿಕೆಚೀಲೂರು ಸತೀಶಗೌಡರು, ವೆಂಕಟೇಶ್, ಸುರೇಂದ್ರನಾಯ್ಕ್, ಕುಮಾರ್ ನಾಯ್ಕ್, ಕುಂಸಿ ಪ್ರಭಾಕರ್, ಯೋಗೇಶ್ ಇದ್ದರು.