ಸುದ್ದಿ ಕಣಜ. ಕಾಂ | DISTRICT | EDUCATION CORNER
ಶಿವಮೊಗ್ಗ: ಬೀದರ್ ನಲ್ಲಿ ಗುರುವಾರ ನಡೆದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲರ ಥಾವರ್ಚಂದ್ ಗೆಹ್ಲೋಟ್ ಅವರು ಪಶು ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸತೀಶ್ ಇವರ ಸಂಶೋಧನಾ ಪ್ರಬಂಧಕ್ಕೆ ಚಿನ್ನದ ಪದಕ ಮತ್ತು ಪಿ.ಎಚ್.ಡಿ ಪ್ರದಾನ ಮಾಡಿದರು.
READ | ವೃದ್ಧ ದಂಪತಿಯನ್ನು ರಕ್ಷಿಸಲು ಹೋಗಿ ಶವವಾದ ಯುವಕ, ಕುಟುಂಬಕ್ಕಿಲ್ಲ ಆಸರೆ
ಡಾ.ಜಿ.ಎಂ.ಸತೀಶ್ ಅವರು ಮಲೆನಾಡುಗಿಡ್ಡ ತಳಿ ಕುರಿತು ಮಂಡಿಸಿರುವ ‘ಮಾಲ್ಯೂಕ್ಯುಲಾರ್ ಕ್ಯಾರಕ್ಟರೈಸೇಶನ್ ಆಫ್ ಟೂಲ್ ಲೈಕ್ ರಿಸೆಪ್ಟಾರ್ ಇನ್ ಮಲೆನಾಡ್ ಗಿಡ್ಡ ಕ್ಯಾಟಲ್’ ಸಂಶೋಧನಾ ಮಹಾ ಪ್ರಬಂಧಕ್ಕೆ ಚಿನ್ನದ ಪದಕದೊಂದಿಗೆ ಪಿ.ಎಚ್.ಡಿ ಪದವಿಗೆ ಭಾಜನರಾಗಿದ್ದಾರೆ. ಪಶು ವೈದ್ಯಕೀಯ ಮಹಾವಿದ್ಯಾಲಯ ಗದಗದ ಡೀನ್ರವರಾದ ಪ್ರೊ. ಆರ್. ನಾಗರಾಜ್ ಅವರು ಇವರಿಗೆ ಮಾರ್ಗದರ್ಶಕರಾಗಿದ್ದರು.