ಸುದ್ದಿ ಕಣಜ.ಕಾಂ | TALUK | CRIME NEWS
ಹೊಸನಗರ: ಪಟ್ಟಣದ ಹೊರವಲಯದಲ್ಲಿರುವ ಮಾವಿನಕೊಪ್ಪ ವೃತ್ತದಲ್ಲಿ ಮಂಗಳವಾರ ಬೆಳಗಿನ ಜಾವ ಚತುಷ್ಪಥ ರಸ್ತೆಯ ಡಿವೈಡರ್ ಗೆ ಟ್ಯಾಂಕರ್ ವೊಂದು ಗುದ್ದಿದ್ದು, ಭಾರಿ ದುರಂತ ತಪ್ಪಿದೆ.
READ | ಏಪ್ರಿಲ್ 28ರಂದು ಶಿವಮೊಗ್ಗ ಕರೆಂಟ್ ಇರಲ್ಲ
ಮಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಬಳ್ಳಾರಿಗೆ ಇಂಧನ ಹೊತ್ತು ತೆರಳುತಿದ್ದ ಟ್ಯಾಂಕರ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಭಾರೀ ವೇಗವಾಗಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಬಹುಭಾಗ ಜಖಂಗೊಂಡಿದ್ದು, ಒಂದು ಟೈಯರ್ ಸಮೀಪದ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಷಾತ್ ಟ್ಯಾಂಕರ್ ಒಳಭಾಗಕ್ಕೆ ಹಾನಿ ಉಂಟಾಗದೇ ಇರುವುದರಿಂದ ಸಂಭವನೀಯ ಅನಾಹುತ ತಪ್ಪಿದಂತಾಗಿದೆ.
ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿದೆ.