ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಹೊಸಮನೆ ರಸ್ತೆ ಜಂಬಣ್ಣ ರೈಸ್ ಮಿಲ್ ಹತ್ತಿರ ಖಾಲಿ ಜಾಗದಲ್ಲಿ ಮಾದಕ ವಸ್ತು ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರನ್ನು ಶನಿವಾರ ಮಧ್ಯಾಹ್ನ ಬಂಧಿಸಲಾಗಿದೆ.
READ | ಮಾನವೀಯತೆ ಮೆರೆದ ಭಜರಂಗ ದಳ ಕಾರ್ಯಕರ್ತ ಹಿಂದೂ ಹರ್ಷನ ಕುಟುಂಬ, ವಿಶ್ವನಾಥ್ ಶೆಟ್ಟಿ ಪುತ್ರನಿಗೆ ಭೇಟಿ, ಕಾರಣವೇನು?
₹70,000 ಮೌಲ್ಯದ ಒಣ ಗಾಂಜಾ ಸೀಜ್
ಬನ್ನೀಕೆರೆ ಗ್ರಾಮದ ಉಮೇಶ್ ನಾಯ್ಕ್(48), ನವುಲೆಯ ನಿತಿನ್(23), ಬಾಪೂಜಿ ನಗರದ ರಾಹಿಲ್ ಖಾನ್(23),
ಹನುಮಂತನಗರದ ನಿವಾಸಿಗಳಾದ ಶ್ರೇಯಸ್(25),
ನಿತಿನ್ ಕುಮಾರ್(26) ಬಂಧಿತರು. ಆರೋಪಿತರಿಂದ ಅಂದಾಜ ₹70,000 ಮೌಲ್ಯದ ಒಟ್ಟು 1 ಕೆಜಿ 100 ಗ್ರಾಂ. ಒಣ ಗಾಂಜಾ, ₹3,670 ನಗದು ಮತ್ತು 1 ದ್ವಿ ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಠಾಣೆ ಪಿ.ಎಸ್.ಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಗಾಂಜಾ ಸಮೇತ ಆರೋಪಿಗಳನ್ನು ಬಂಧಿಸಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದೆ. ತನಿಖೆ ಕೈಗೊಳ್ಳಲಾಗಿದೆ.