ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ವ್ಯಾಪ್ತಿಯ ಆನವೇರಿ ಸಮೀಪ ಬೈಕ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಕನಸಿನಕಟ್ಟೆ ನಿವಾಸಿ ಮಹೇಶ್ ಮೃತರು. ಇವರು ದಿಗ್ಗೇನಹಳ್ಳಿ ಗ್ರಾಮದಲ್ಲಿರುವ ತಂಗಿಯ ಮನೆಗೆ ಹೋಗಿ ಬರುವಾಗ ಘಟನೆ ನಡೆದಿದೆ.
READ | ಲಕ್ಷಾಂತರ ಮೌಲ್ಯದ ‘ತಿಮಿಂಗಲ ವಾಂತಿ’ ಸೀಜ್
ಮಡಿಲಕ್ಕಿ ನೀಡಿ ವಾಪಸ್ ಬರುತ್ತಿದ್ದ ಮಹೇಶ್
ತಂಗಿಗೆ ಮಡಿಲಕ್ಕಿ ಕೊಟ್ಟು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಬೈಕ್ ನಲ್ಲಿ ವಾಪಸ್ ಬರುತ್ತಿದ್ದಾಗ ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾರೆ.
ಜಾತ್ರೆ ಮುಗಿಸಿಕೊಂಡು ವಾಪಸ್ ತೆರಳುವಾಗ ಮಹೇಶ್ ಗೆ ಮಧ್ಯಾಹ್ನ ಊಟ ಮಾಡಿ ಹೋಗುವಂತೆ ಬಲವಂತ ಮಾಡಿದರೂ ಕೆಲಸವಿದೆ ಎಂದು ಹೇಳಿ ತರಾತುರಿಯಲ್ಲಿ ಆತ ಹೊರಟಿದ್ದ ಎನ್ನಲಾಗಿದೆ.