ಸುದ್ದಿ ಕಣಜ.ಕಾಂ | DISTRICT | CRIME NEWS
ಶಿವಮೊಗ್ಗ: ಮಹಾನಗರ ಪಾಲಿಕೆ ಕಂಪ್ಯೂಟರ್ ಆಪರೇಟರ್ ವೊಬ್ಬರು ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (ACB) ಬಲೆಗೆ ಬಿದಿದ್ದಾರೆ.
ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ವಿಜಯ ಕುಮಾರ್ ಅವರು ಬಲೆಗೆ ಬಿದಿದ್ದು, ಮನೆಯ ಕಟ್ಟಡ ಪರವಾನಗಿ (license) ನವೀಕರಣಕ್ಕಾಗಿ ಕಿರಿಯ ಎಂಜಿನಿಯರ್ ಪರವಾಗಿ ಲಂಚ ಸ್ವೀಕರಿಸುತಿದ್ದ ಎಂದು ತಿಳಿದುಬಂದಿದೆ.
READ | ಫಸ್ಟ್ ಅಟೆಂಪ್ಟ್ ನಲ್ಲೇ ಯುಪಿಎಸ್ಸಿ ಪರೀಕ್ಷೆ ಪಾಸ್ ಆದ ಶಿವಮೊಗ್ಗ ವೈದ್ಯ
ವಿನೋಬನಗರದ ನಿವಾಸಿಯೊಬ್ಬರು ಕಟ್ಟಡ ಲೈಸೆನ್ಸ್ ನವೀಕರಣಕ್ಕಾಗಿ ಮುಂದಾಗಿದ್ದು, ಇದಕ್ಕಾಗಿ ₹10,000 ಬೇಡಿಕೆ ಇಡಲಾಗಿತ್ತು. ಮೊದಲ ಕಂತಿನಲ್ಲಿ ₹6,000 ಲಂಚ ಸ್ವೀಕರಿಸುತಿದ್ದಾಗ ಬಲೆಗೆ ಬಿದಿದ್ದಾನೆ.