ಸುದ್ದಿ ಕಣಜ.ಕಾಂ | DISTRICT | ROHIT CHAKRATIRTHA
ಶಿವಮೊಗ್ಗ: ರೋಹಿತ್ ಚಕ್ರತೀರ್ಥ(Rohit Chakratirtha) ರ ಬಗ್ಗೆ ಮಾತನಾಡುವ ಮುನ್ನ ಹುಷಾರ್. ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ನಿಮ್ಮ ‘ಚಕ್ರ’ವೇ ಬದಲಾಗಲಿದೆ ಎಂದು ಬಿಜೆಪಿ ಮುಖಂಡ, ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ ಎಚ್ಚರಿಕೆ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ (kannada sahitya parishat) ಅಧ್ಯಕ್ಷ ಡಿ.ಮಂಜುನಾಥ್ ಅವರು ಇಲ್ಲದ ಉಸಾಬರಿಗೆ ಬರಬಾರದು. ಅವರು ಪ್ರಜ್ಞೆ ಇಟ್ಟುಕೊಂಡು ಮಾತನಾಡಬೇಕು. ಹೀಗೆಯೇ ಅವರು ಮುಂದುವರಿದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು.
READ | ಜೂನ್ 9ರಂದು ಶಿವಮೊಗ್ಗದಲ್ಲಿ ನಡೆಯಲಿದೆ ನೇರ ಸಂದರ್ಶನ, ಯಾರಿಗೆಲ್ಲ ಅವಕಾಶ?
ಚಕ್ರತೀರ್ಥರಿಂದ ಅತ್ಯುತ್ತಮ ಕೆಲಸ
ಪಠ್ಯಪುಸ್ತಕ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ವಿನಾಕಾರಣ ವಿವಾದ ಎಬ್ಬಿಸುತ್ತಿದೆ. ಬ್ರಿಟಿಷರು ಬಿಟ್ಟುಹೋದ ಸಂಗತಿಗಳನ್ನೇ ಪಠ್ಯದಲ್ಲಿ ಮುಂದುವರಿಸಲಾಗುತ್ತಿದೆ. ಚಕ್ರತೀರ್ಥರು ಭಾರತೀಯ ಪರಂಪರೆ, ಸಂಸ್ಕೃತಿ, ಇತಿಹಾಸದ ಸತ್ಯಸಂಗತಿಗಳನ್ನ ಪಠ್ಯಪುಸ್ತಕದಲ್ಲಿ ಅನಾವರಣಗೊಳಿಸಿದ್ದಾರೆ ಎಂದರು.
ಈ ದೇಶದಲ್ಲಿ ಕಾಂಗ್ರೆಸ್ ಇದುವರೆಗೂಮಾರಕವೆನಿಸುವ, ಬೇಡದ ಪಠ್ಯಗಳನ್ನೇ ತುರುಕಿದ್ದಾರೆ. ಶ್ರೀರಾಮನನ್ನೇ ಟೀಕಿಸಿದ್ದಾರೆ. ಮಕ್ಕಳ ಭವಿಷ್ಯದ ಜೊತೆ ಆಟವಾಡಿದ್ದಾರೆ. ಮೂರು ಬಾರಿ ಪಠ್ಯಪುಸ್ತಕಗಳ ಪರಿಷ್ಕರಣೆಯಾಗಿದೆ. ಅದೇ ರೀತಿ ಈಗಲೂ ಆಗುತ್ತಿದೆ ಎಂದು ಹೇಳಿದರು.
ಪ್ರಮುಖರಾದ ಜಗದೀಶ್, ಜ್ಞಾನೇಶ್ವರ್, ನಾಗರಾಜ್ ಉಪಸ್ಥಿತರಿದ್ದರು.
https://suddikanaja.com/2022/06/02/protest-against-rohit-chakratirtha-at-shimoga/