ಸುದ್ದಿ ಕಣಜ.ಕಾಂ | DISTRICT | AGAMUDI MATRIMONY
ಶಿವಮೊಗ್ಗ: ಅಗಮುಡಿ ಸಮಾಜ ಸೇವಾ ಸಂಘದಿಂದ ವಧು-ವರರ ಅನ್ವೇಷಣೆಗಾಗಿ ಮೊದಲಿಯಾರ್ ಅಗಮುಡಿ ಮೆಟ್ರಿಮನಿ ಶಿವಮೊಗ್ಗ ಡಾಟ್ ಕಾಂ ಹೆಸರಿನಲ್ಲಿ ವೆಬ್ ಸೈಟ್ ಆರಂಭವಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಎನ್. ಮಂಜುನಾಥ್ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಇದುವರೆಗೆ ಆಫ್ ಲೈನ್ನಲ್ಲಿ ವಧು- ವರರ ಅನ್ವೇಷಣಾ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು. ವೆಬ್ಸೈಟ್ ಆರಂಭಿಸಲಾಗಿದೆ.
12ರಂದು ಉದ್ಧಾಟನೆ ಕಾರ್ಯಕ್ರಮ
ವೆಬ್ ಸೈಟ್ ಉದ್ಘಾಟನೆ ಸಮಾರಂಭ ಜೂನ್ 12ರಂದು ಮಧ್ಯಾಹ್ನ 12 ಗಂಟೆಗೆ ಆಲ್ಕೋಳ ಸಮೀಪದ ಅಗಮುಡಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ. ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಕೆಎಸ್.ಎಸ್.ಐಡಿಸಿ ಉಪಾಧ್ಯಕ್ಷ ಎಸ್. ದತ್ತಾತ್ರಿ ಭಾಗವಹಿಸಲಿದ್ದಾರೆ ಎಂದರು.
ಸಂಘದ ಅಧ್ಯಕ್ಷ ಎಂ.ಭೂಪಾಲ್, ಉಪಾಧ್ಯಕ್ಷ ಜಿ.ದೊರೆಸ್ವಾಮಿ, ಎನ್.ಕುಮಾರ್, ವಿ. ಮಂಜುನಾಥ್, ಕೆ. ಮಂಜುನಾಥ್, ಎಂ.ಆನಂದ್, ಎನ್. ಷಣ್ಮುಖ, ಜಿ. ಮನೋಹರ್ ಉಪಸ್ಥಿತರಿದ್ದರು.