ಸುದ್ದಿ ಕಣಜ.ಕಾಂ | CITY | CORPORATION
ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ಘನತ್ಯಾಜ್ಯ ವಿಲೇವಾರಿ ಹಾಗೂ ಒಳಚರಂಡಿ ಶುದ್ಧೀಕರಣ ಉಪಯೋಗಕ್ಕಾಗಿ ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಖರೀದಿಸಲಾದ ವಾಹನಗಳಿಗೆ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಚಾಲನೆ ನೀಡಿದರು.
READ | ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಕ್ಕೆ ಡೇಟ್ ಫಿಕ್ಸ್, ಯಾವ ಗ್ರಾಮಕ್ಕೆ ಭೇಟಿ?
ಎಷ್ಟು ವಾಹನಗಳು?
ಬ್ಯಾಟರಿಚಾಲಿತ ಲಘು ಘನತ್ಯಾಜ್ಯ ವಿಲೇವಾರಿ ಆಟೋಗಳು 6, ಯುಜಿ.ಡಿ(ಒಳಚರಂಡಿ)ಸಕ್ಕಿಂಗ್ ಕಂ ಜಟ್ಟಿಂಗ್ ಮಿಷನ್ 2 ಮತ್ತು 6 ಕ್ಯೂಬಿಕ್ ಸಾಮರ್ಥ್ಯ ಟಿಪ್ಪರ್ ಲಾರಿಗಳು 5 ಒಟ್ಟು 13 ವಾಹನಗಳಿಗೆ ಚಾಲನೆ ನೀಡಲಾಗಿದೆ. ಈ ವಾಹನಗಳು ನಗರದಾದ್ಯಂತ ಬುಧವಾರದಿಂದಲೇ ಕಾರ್ಯಾರಂಭಿಸಲಿವೆ.
ಪಾಲಿಕೆ ಉಪ ಮೇಯರ್ ಶಂಕರ್ ಗನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು, ಆಯುಕ್ತ ಮಾಯಣ್ಣಗೌಡ, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.