ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಶುಕ್ರವಾರ ತುಂಗಾ ನದಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋದಾಗ ನೀರಿನಲ್ಲಿ ನಾಪತ್ತೆಯಾಗಿದ್ದ ಬಾಲಕನ ಶವ ಶನಿವಾರ ಪತ್ತೆಯಾಗಿದೆ.
READ | ಈಜಲು ಹೋದ ಬಾಲಕ ತುಂಗಾ ನದಿ ಪಾಲು
ಬಾಪೂಜಿನಗರದ ಚರಣ್(17) ಶವ ಪತ್ತೆಯಾಗಿದೆ. ಶುಕ್ರವಾರ ರಾತ್ರಿಯವರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದು, ಚರಣ್ ಪತ್ತೆಯಾಗದ ಕಾರಣದಿಂದ ಶನಿವಾರ ಬೆಳಗ್ಗೆಯೂ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ, ಶವ ಕಾಣಿಸಿದ್ದು, ಬೋಟ್ ಮೂಲಕ ದಡಕ್ಕೆ ತರಲಾಗಿದೆ.