ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಊರುಗಡೂರು (Urgadur ) ಗ್ರಾಮದಲ್ಲಿ ಗಾಂಜಾ (Cannabis) ಮಾರಾಟ ಮಾಡುತಿದ್ದ ನಾಲ್ವರು ಯುವಕರನ್ನು ಸೋಮವಾರ ಬಂಧಿಸಲಾಗಿದೆ.
ಬುದ್ಧನಗರ ನಿವಾಸಿ ತಿಲಕ್(23), ಆಯನೂರಿನ ಹೊಸೂರು ಗ್ರಾಮದ ಮಹಮ್ಮದ್ ಗೌಸ್(21), ಚೋರಡಿಯ ಕೋಟೆ ಹಾಳ್ ನಿವಾಸಿ ಮಂಜುನಾಥ್(20), ಭದ್ರಾವತಿಯ ಸಾದತ್ ಕಾಲೋನಿಯ ಸುಮನ್(23) ಬಂಧಿತರು.
READ | 38,07,450 ಮೌಲ್ಯದ ಗಾಂಜಾ ನಾಶ
ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ
ನಗರದ ಊರುಗಡೂರು ಗ್ರಾಮದಲ್ಲಿ ಸೂಡಾ(SUDA)ದಿಂದ ನಿರ್ಮಿಸುತ್ತಿರುವ ಖಾಲೀ ಲೇಔಟ್ ನಲ್ಲಿ ಯುವಕರು ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಶಿವಮೊಗ್ಗದ ಸಿಇಎನ್ ಠಾಣೆ ಪಿಎಸ್.ಐ ಹಾಗೂ ಸಿಬ್ಬಂದಿಯ ತಂಡವು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಅವರ ಬಳಿಯಿಂದ ₹30,000 ಮೌಲ್ಯದ ಒಟ್ಟು 1 ಕೆಜಿ 250 ಗ್ರಾಂ ತೂಕದ ಒಣ ಗಾಂಜಾ ಮತ್ತು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಗಾಂಜಾ ಮಾರಾಟ, ತಂಡ ಪಾನೀ ಸೇರಿ ಇಬ್ಬರು ಅರೆಸ್ಟ್, ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ