ಸುದ್ದಿ ಕಣಜ.ಕಾಂ | CITY | KS ESHWARAPPA
ಶಿವಮೊಗ್ಗ: ಮಾಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ, ಶಾಸಕ ಕೆ.ಎಸ್.ಈಶ್ವರಪ್ಪ ರವರ ಜನ್ಮದಿನಾಚರಣೆ ಪ್ರಯುಕ್ತ ಹೊಸಮನೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಬ್ಯಾಗ್ ಮತ್ತು ನೋಟ್ ಬುಕ್ ವಿತರಣೆ ಮಾಡಲಾಯಿತು.
ಕೆ.ಎಸ್. ಈಶ್ವರಪ್ಪ ಅವರ ಪುತ್ರ ಬಿಜೆಪಿ ಮುಖಂಡ ಕೆ.ಇ.ಕಾಂತೇಶ್ ಅವರು ಮಕ್ಕಳಿಗೆ ಬ್ಯಾಗ್, ಪುಸ್ತಕಗಳನ್ನು ವಿತರಣೆ ಮಾಡಿದರು. ಈಶ್ವರಪ್ಪ ಅವರ ಅಭಿಮಾನಿ ಅವಿನಾಶ್ ಎಲ್.ರಾಜ್, ಯಶಸ್ವಿನಿ ಅವಿನಾಶ್, ಕುಮಾರ್, ಪ್ರೇಮ ಸೇರಿದಂತೆ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.