ಸುದ್ದಿ ಕಣಜ.ಕಾಂ | DISTRICT | KUVEMPU UNIVERSITY
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 31 ಮತ್ತು 32ನೇ ಘಟಿಕೋತ್ಸವ ಸಮಾರಂಭ ಜೂನ್ 16 ರಂದು ಬೆಳಗ್ಗೆ 10.30 ಗಂಟೆಗೆ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯ(Kuvempu university)ದ ಬಸವ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ವಿವಿ ಕುಲಪತಿ ಬಿ.ಪಿ. ವೀರಭದ್ರಪ್ಪ (Prof.B.P.Veerabhadrappa) ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಮಾರಂಭಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (ThawarChand Gehlot), ಸಹ ಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಆಗಮಿಸಿಲಿದ್ದಾರೆ. ಎರಡೂ ಘಟಿಕೋತ್ಸವಗಳ ಮುಖ್ಯ ಭಾಷಣವನ್ನು ಮೈಸೂರಿನ ಭಾರತೀಯ ಆಹಾರ ತಾಂತ್ರಿಕ ಸಂಶೋಧನಾಲಯದ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಅವರು ಮಾಡಲಿದ್ದಾರೆ ಎಂದರು.
31ನೇ ಘಟಿಕೋತ್ಸವದಲ್ಲಿ 25,435 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹ
2019-20 ಸಾಲಿನ ಘಟಿಕೋತ್ಸವದಲ್ಲಿ 61 ಪುರುಷರು ಹಾಗೂ 30 ಮಹಿಳೆಯರು ಸೇರಿ ಒಟ್ಟು 91 ಅಭ್ಯರ್ಥಿಗಳು ಪಿ.ಎಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. 10,214 ಪುರುಷರು ಹಾಗೂ 15,221 ಮಹಿಳೆಯರು ಸೇರಿ ಒಟ್ಟು 25,435 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.
ಘಟಿಕೋತ್ಸವದಲ್ಲಿ 127 ಸ್ವರ್ಣ ಪದಕಗಳು ಇದ್ದು, ಅವುಗಳನ್ನು 20 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 71 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. 17 ನಗದು ಬಹುಮಾನಗಳು ಇದ್ದು, ಎಲ್ಲವುಗಳನ್ನು 13 ಮಹಿಳಾ ವಿದ್ಯಾರ್ಥಿಗಳು ಹಂಚಿಕೊಂಡಿಡಿರುತ್ತಾರೆ ಎಂದರು.
READ | ಡಿ.ಎಚ್.ಶಂಕರಮೂರ್ತಿ ಸೇರಿ ಆರು ಜನರಿಗೆ ಕುವೆಂಪು ವಿವಿ ಗೌರವ ಡಾಕ್ಟರೇಟ್, ಯಾರಿಗೆಲ್ಲ ಲಭಿಸಿದೆ?
ಚಿನ್ನದ ಪದಕ ಪಡೆದವರು
- ಕನ್ನಡ ಭಾರತಿ ವಿಭಾಗದ ಎಂ.ಟಿ.ಪ್ರಣೀತಾ ಅವರು ಒಟ್ಟು 8 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿದ್ದಾರೆ. ವಿವಿಯ ಎಂಬಿಎ ವಿಭಾಗದ ಕೆ.ಯು.ಯತೀಶ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಎಸ್.ಎ.ಅನುಷಾ, ಎನ್ಇಎಸ್ ಸಂಸ್ಥೆಯ ಬಿಕಾಂ ವಿದ್ಯಾರ್ಥಿನಿ ನಿವ್ಯಾ ಕೆ. ನಾಯಕ್ ತಲಾ 5 ಸ್ವರ್ಣಪದಕಗಳನ್ನು ಪಡೆದಿದ್ದಾರೆ.
- ಗಣಿತಶಾಸ್ತ್ರ ಅಧ್ಯಯನ ವಿಭಾಗದ ಬಿ.ಎನ್. ಉಷಾ 4 ಸ್ವರ್ಣ ಪದಕ ಹಾಗೂ 3 ನಗದು ಬಹುಮಾನ ಪಡೆದಿದ್ದಾರೆ. ಸಮಾಜಶಾಸ್ತ್ರ ವಿಭಾಗದ ಸಿ.ನವೀನ್ ಕುಮಾರ್, ಸಸ್ಯಶಾಸ್ತ್ರ ವಿಭಾಗದ ರಕ್ಷಿತ್ ಎಚ್.ಎಂ. ಜೈನ್, ರಸಾಯನಶಾಸ್ತ್ರ ವಿಭಾಗದಲ್ಲಿ ಎಂ.ಸಿ.ದಿವ್ಯಾ, ಪರಿಸರ ವಿಜ್ಞಾನ ವಿಭಾಗದಲ್ಲಿ ಸಂಪದ ಶಾಸ್ತ್ರಿ ಬಿ.ಎಸ್. ತಲಾ 4 ಸ್ವರ್ಣ ಪದಕ ಪಡೆದಿದ್ದಾರೆ.
- ಸೌರಭ ಎಸ್.ಕಾಮತ್, ಅಬ್ದುಲ್ ಫತಾ, ಎಸ್.ಶ್ವೇತಾ, ವೈ.ಪಿ.ಸರಳಾ, ಕೆ.ಸಂಜನಾ ತಲಾ ಮೂರು ಸ್ವರ್ಣ ಪದಕ ಪಡೆದಿದ್ದಾರೆ. ದೂರಶಿಕ್ಷಣ ನಿರ್ದೇಶನಾಲಯದಡಿ ಕಲಾ, ವಾಣಿಜ್ಯ, ಕಾನೂನು, ವಿಜ್ಞಾನ ನಿಖಾಯಗಳಡಿ 12,923 ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದರು.
- 32ನೇ ಘಟಿಕೋತ್ಸವದಲ್ಲಿ 20,638 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹ
2020-21 ನೇ ಸಾಲಿನ ಘಟಿಕೋತ್ಸವದಲ್ಲಿ 82 ಪುರುಷರು ಹಾಗೂ 47 ಮಹಿಳೆಯರು ಸೇರಿ ಒಟ್ಟು 129 ಅಭ್ಯರ್ಥಿಗಳು ಪಿ.ಎಚ್.ಡಿ. ಪದವಿ ಪಡೆಯಲು ಅರ್ಹರಾಗಿರುತ್ತಾರೆ. ಈ ಘಟಿಕೋತ್ಸವದಲ್ಲಿ 8,324 ಪುರುಷರು ಹಾಗೂ 12,314 ಮಹಿಳೆಯರು ಸೇರಿ ಒಟ್ಟು 20,638 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.
ಯಾರಿಗೆಲ್ಲ ಸ್ವರ್ಣ ಪದಕ ಲಭಿಸಿದೆ? - ಘಟಿಕೋತ್ಸವದಲ್ಲಿ 132 ಸ್ವರ್ಣಪದಕಗಳಿದ್ದು, 14 ಪುರುಷರು ಹಾಗೂ 52 ಮಹಿಳೆಯರು ಸೇರಿ ಒಟ್ಟು 66 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ. 17 ನಗದು ಬಹುಮಾನಗಳು ಇದ್ದು, 13 ಮಹಿಳಾ ವಿದ್ಯಾರ್ಥಿಗಳು ಹಾಗೂ ಇಬ್ಬರು ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 15 ವಿದ್ಯಾರ್ಥಿಗಳು ಹಂಚಿಕೊಂಡಿರುತ್ತಾರೆ.
- ಕನ್ನಡ ಭಾರತಿ ವಿಭಾಗದ ಎಚ್.ಎನ್.ದಿವ್ಯಾ ಒಟ್ಟು 11 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿರುತ್ತಾರೆ. ಎಂಬಿಎ ವಿಭಾಗದ ಟಿ.ಪ್ರಿಯಾಂಕ 6 ಸ್ವರ್ಣ ಪದಕಗಳನ್ನು ಗಳಿಸಿದ್ದಾರೆ. ಎಂಎ ಸಮಾಜಶಾಸ್ತ್ರ ವಿಭಾಗದ ಸಿ.ತನೂಷಾ, ರಸಾಯನಶಾಸ್ತ್ರ ವಿಭಾಗದ ಎಂ.ಸಂಯುಕ್ತ ಪೈ ಹಾಗೂ ಎಟಿಎನ್.ಸಿಸಿಯ ಬಿಕಾಂ ವಿಭಾಗದ ಮೇಘನಾ ತಲಾ 5 ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
- ಗಣಿತಶಾಸ್ತ್ರ ವಿಭಾಗದ ಎನ್. ಸಿಂಧೂ 4 ಸ್ವರ್ಣ ಪದಕ, 2 ನಗದು ಬಹುಮಾನ, ರಾಜ್ಯಶಾಸ್ತ್ರ ವಿಭಾಗದ ಎಂ. ಅಶ್ವಿನಿ 4 ಸ್ವರ್ಣ ಪದಕ, ಪರಿಸರ ವಿಜ್ಞಾನ ವಿಭಾಗದ ಎಸ್. ಪೂಜಾ 4 ಸ್ವರ್ಣ ಪದಕ ಪಡೆದಿದ್ದಾರೆ. ಬಿಎಡ್ ವಿಭಾಗದಲ್ಲಿ ಆಯಿಷಾ ಫರ್ ಹಿನ್ ಶೇಖ್ 3 ಸ್ವರ್ಣ ಪದಕ, 1 ನಗದು ಬಹುಮಾನ ಪಡೆದಿದ್ದಾರೆ.
- ಅಂಜುಮ್ ಬಷೀರ್ ಸಾಬ್, ಆಲಿಷಾ ಜೋಸೆಫ್, ಕೆ.ಎ. ಗಾಯಿತ್ರಿ, ಸಿ.ಕೆ. ರಂಜಿತಾ, ಎಂ. ಯಶಸ್ವಿನಿ, ಎಂ. ರುಚಿತಾಶ್ರೀ, ಬಿ.ಎಂ. ಸೃಷ್ಟಿ ತಲಾ 3 ಸ್ವರ್ಣ ಪದಕ ಪಡೆದಿದ್ದಾರೆ. ದೂರಶಿಕ್ಷಣ ನಿರ್ದೇಶನಾಲಯದಡಿ ಕಲಾ, ವಾಣಿಜ್ಯ, ಕಾನೂನು, ವಿಜ್ಞಾನ ನಿಕಾಯಗಳಡಿ 7188 ವಿದ್ಯಾರ್ಥಿಗಳು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ.
ಮಾಧ್ಯಮಗೋಷ್ಠಿಯಲ್ಲಿ ಕುವೆಂಪು ವಿವಿ ಕುಲಸಚಿರಾದ ಜಿ.ಅನುರಾಧಾ, ಮೌಲ್ಯಮಾಪನ ಕುಲಸಚಿವ ನವೀನ್ ಕುಮಾರ್, ಉಪ ಕುಲಸಚಿವ ಡಾ.ಕೆ.ಆರ್. ಮಂಜುನಾಥ್, ಪಿ.ಆರ್.ಒ. ಸತ್ಯಪ್ರಕಾಶ್ ಇದ್ದರು.