ಸುದ್ದಿ ಕಣಜ.ಕಾಂ | DISTRICT | KUVEMPU UNIVERSITY
ಶಿವಮೊಗ್ಗ: ಕೊರೊನಾ ಸೋಂಕು, ಲಾಕ್ ಡೌನ್ ನಿಂದಾಗಿ ಮುಂದೂಡಲ್ಪಟ್ಟಿದ್ದ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವ (KUVEMPU UNIVERSITY CONVOCATION) ಗುರುವಾರ ಜರುಗಿತು. ಒಂದೇ ವರ್ಷ ಎರಡು ಘಟಿಕೋತ್ಸವಗಳಿಗೆ ವಿವಿ ಸಾಕ್ಷಿಯಾಯಿತು.
ಶಂಕರಘಟ್ಟದಲ್ಲಿ ಗುರುವಾರ ಏರ್ಪಡಿಸಿದ 31 ಮತ್ತು 32ನೇಯ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕೊಪ್ಪ ತಾಲೂಕಿನ ಕನ್ನಡ ವಿಭಾಗದಲ್ಲಿ ಎಂ.ಟಿ.ಪ್ರಣೀತಾ 11 ಚಿನ್ನದ ಪದಕ, ಬಹುಮಾನ ಪಡೆದರೆ ಹಣಗೆರೆಕಟ್ಟೆಯ ಎಚ್.ಎನ್.ದಿವ್ಯಾ 11 ಪದಕಗಳನ್ನು ಪಡೆದರು.
READ | ಕುವೆಂಪು ವಿವಿ ಘಟಿಕೋತ್ಸವದಲ್ಲಿ ಎಷ್ಟು ಜನರಿಗೆ ಪ್ರಶಸ್ತಿ ಪ್ರದಾನ, ಚಿನ್ನ ಪಡೆದವರೆಷ್ಟು?
ರ್ಯಾಂಕ್ ಹೋಲ್ಡರ್ ಗಳು ಹೇಳಿದ್ದೇನು?
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಣೀತಾ, ‘ರ್ಯಾಂಕ್ ಪಡೆಯುವುದು ಮುಖ್ಯವಲ್ಲ. ಜೀವನ ರೂಪಿಸಿಕೊಳ್ಳಲು ಅಂಕಗಳಿಗಿಂತ ಆತವಿಶ್ವಾಸ ಮುಖ್ಯ. ನಾನು ಕ್ಯಾಂಪಸ್ ನಲ್ಲಿದ್ದಾಗ ಇಲ್ಲಿಯ ಲೈಬ್ರರಿ ಸೇರಿದಂತೆ ವಿದ್ಯಾಭ್ಯಾಸಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇನೆ. ಪರಿಣಾಮ ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ’ ಎಂದರು.
ದಿವ್ಯಾ ಮಾತನಾಡಿ, ‘ಇಷ್ಟೊಂದು ಪದಕಗಳು ಬರುವ ನಿರೀಕ್ಷೆ ಇರಲಿಲ್ಲ. ಸಾಧನೆಯಿಂದ ಮನೆಯವರು ಮತ್ತು ನನಗೆ ತುಂಬ ಖುಷಿಯಾಗಿದೆ. ಇದರ ಹಿಂದೆ ಕುಟುಂಬದ ಸಹಕಾರವಿದೆ. ನನ್ನ ಮನೆಯಲ್ಲಿ ನಾನು ಮೊದಲ ಪಿಜಿ ಹೋಲ್ಡರ್ ಆಗಿದ್ದೇನೆ. ಅದರಲ್ಲೂ ಚಿನ್ನದ ಪದಕ ಪಡೆದಿದ್ದಕ್ಕೆ ತಂದೆ-ತಾಯಿ ಪಟ್ಟ ಕಷ್ಟ ಸಾರ್ಥಕ ಎನಿಸುತಿದ್ದೆ. ಪ್ರೊಫೆಸರ್ ಆಗುವ ಬಯಕೆ ಇದೆ’ ಎಂದು ಭಾವನೆ ಹಂಚಿಕೊಂಡರು.
ಯಾರಿಗೆಷ್ಟು ಚಿನ್ನದ ಪದಕ?
2019-20 ಸಾಲಿನ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ಪ್ರಣೀತಾ ಅವರು ಒಟ್ಟು 8 ಸ್ವರ್ಣ ಪದಕ ಹಾಗೂ 2 ನಗದು ಬಹುಮಾನಗಳನ್ನು ಪಡೆದಿದ್ದಾರೆ. ವಿವಿಯ ಎಂಬಿಎ ವಿಭಾಗದ ಕೆ.ಯು.ಯತೀಶ್, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ವಿಭಾಗದ ಎಸ್.ಎನ್. ಅನುಷಾ, ಇ.ಎಸ್.ಸಂಸ್ಥೆಯ ಬಿಕಾಂ ವಿದ್ಯಾರ್ಥಿನಿ ನಿವ್ಯಾ ಕೆ. ನಾಯಕ್ ತಲಾ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
READ | ಸರ್ಕಾರಿ ಶಾಲೆಗಳಿಗೆ ಟಾರ್ಗೆಟ್ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್
2020-21ನೇ ಸಾಲಿನ ಘಟಿಕೋತ್ಸವದಲ್ಲಿ ಕನ್ನಡ ಭಾರತಿ ವಿಭಾಗದ ಎಚ್.ಎನ್.ದಿವ್ಯಾ 11 ಪದಕ ಹಾಗೂ 2 ನಗದು ಬಹುಮಾನ ಪಡೆದಿದ್ದಾರೆ. ಎಂಬಿಎ ವಿಭಾಗದ ಟಿ.ಪ್ರಿಯಾಂಕ ಆರು ಪದಕಗಳನ್ನು ಪಡೆದಿದ್ದಾರೆ. ಎಂಎ ಸಮಾಜಶಾಸ್ತ್ರ ವಿಭಾಗದ ಸಿ.ತನೂಷಾ, ರಸಾಯನಶಾಸ್ತ್ರ ವಿಭಾಗದ ಸಂಯುಕ್ತ ಪೈ ಹಾಗೂ ಎಟಿಎನ್.ಸಿಸಿಯ ಬಿಕಾಂನ ಮೇಘನಾ ತಲಾ ಐದು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಆರು ಜನರಿಗೆ ಗೌರವ ಡಾಕ್ಟರೇಟ್
31ನೇಯ ಘಟಿಕೋತ್ಸವ- ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಎಚ್. ಶಂಕರಮೂರ್ತಿ, ಶಿಕ್ಷಣ ತಜ್ಞೆ ಗೀತಾ ನಾರಾಯಣನ್, ಯೋಗ ಗುರು ಭ.ಮ. ಶ್ರೀಕಂಠ ಹಾಗೂ 32ನೇ ಘಟಿಕೋತ್ಸವದ ಭಾಗವಾಗಿ ಶಿಕ್ಷಣ ತಜ್ಞ ಪ್ರೊ. ಟಿ.ವಿ. ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್, ಯೋಗ ಗುರು ಬಾ.ಸು. ಅರವಿಂದ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
https://suddikanaja.com/2021/03/18/roberrt-cinema-actress-expressed-her-gratitude-to-fans/