ಸುದ್ದಿ ಕಣಜ.ಕಾಂ | TALUK | LEOPARD
ಭದ್ರಾವತಿ: ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರ (ವಿಐಎಸ್ಎಲ್) ವಸತಿ ಗೃಹದಲ್ಲಿ ಬುಧವಾರ ಬೆಳಗ್ಗೆ ಕಾಣಿಸಿಕೊಂಡು ಜನರ ಭೀತಿಗೆ ಕಾರಣವಾಗಿದ್ದ ಚಿರತೆ ನಾಲ್ಕೂವರೆ ಗಂಟೆಗಳ ಕಾರ್ಯಾಚರಣೆ ಬಳಿಕ ಬೋನಿಗೆ ಬಿದ್ದಿದೆ.
READ | ಭದ್ರಾವತಿಯ ವಿಐಎಸ್ಎಲ್ ವಸತಿಗೃಹದಲ್ಲಿ ಚಿರತೆ ಪ್ರತ್ಯಕ್ಷ, ಅರಣ್ಯ ಇಲಾಖೆ ಹೈ ಅಲರ್ಟ್
ವಸತಿ ಗೃಹದಲ್ಲಿ ಓಡಾಡುತ್ತಿದ್ದ ಚಿರತೆಯ ವಿಡಿಯೋ ವೈರಲ್ ಆಗಿದ್ದೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದರು. ಚಿರತೆಗೆ ಅರವಳಿಕೆ ನೀಡಿದ ಬಳಿಕ ಅದನ್ನು ಹಿಡಿದು ಬೋನಿಗೆ ಹಾಕಲಾಗಿದೆ. ತದನಂತರ ಅದನ್ನು ಕೊಂಡೊಯ್ಯಲಾಗಿದೆ.