ಸುದ್ದಿ ಕಣಜ.ಕಾಂ | DISTRICT | GAJANUR DAM
ಶಿವಮೊಗ್ಗ: ತಾಲೂಕಿನ ಗಾಜನೂರು ಜಲಾಶಯ(Gajanur dam)ದಲ್ಲಿ ಒಳಹರಿವು (Inflow) ಏರಿಕೆಯಾಗಿದ್ದು, ಸೋಮವಾರ ಬೆಳಗ್ಗೆ 10 ಗೇಟ್ ಗಳನ್ನು ತೆರೆದು ನೀರನ್ನು ನದಿಗೆ ಬಿಡಲಾಗುತ್ತಿದೆ.
ಶೃಂಗೇರಿ (Sringeri ) ಮತ್ತು ಕೊಪ್ಪ (Koppa) ತಾಲೂಕಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತುಂಗೆ (Tunga river) ಭೋರ್ಗರೆಯುತ್ತಿದ್ದಾಳೆ. 22,900 ಕ್ಯೂಸೆಕ್ಸ್ (cusecs) ನೀರನ್ನು ಹೊರಬಿಡಲಾಗುತ್ತಿದೆ. ಒಳಹರಿವು ಇನ್ನಷ್ಟು ಏರಿಕೆಯಾದರೆ ಜಲಾಶಯದಿಂದ ಮತ್ತಷ್ಟು ನೀರು ಹರಿಸಲಾಗುವುದು.
ಶನಿವಾರ ರಾತ್ರಿ 20,227 ಕ್ಯೂಸೆಕ್ಸ್ ನೀರು ಹರಿದು ಬರುತಿತ್ತು. ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗುತಿತ್ತು. ಭಾನುವಾರ ಬೆಳಗ್ಗೆ ಹೊರ ಹರಿವಿನ ಪ್ರಮಾಣ 16,431 ಕ್ಯೂಸೆಕ್ಸ್ ಗೆ ಇಳಿಕೆಯಾಗಿದೆ.
ಯಡೂರಿನಲ್ಲಿ 167 ಎಂಎಂ ಮಳೆ
ಹೊಸನಗರ (Hosanagar) ತಾಲೂಕಿನ ಯಡೂರಿನಲ್ಲಿ ಅತಿ ಹೆಚ್ಚು 167 ಎಂಎಂ ಮಳೆಯಾಗಿದೆ. ಅದೇ ಹುಲಿಕಲ್ (Hulikal) ನಲ್ಲಿ 134 ಎಂಎಂ, ಮಾಣಿ ಜಲಾಶಯ (Mani Dam) ವ್ಯಾಪ್ತಿಯಲ್ಲಿ 116 ಎಂಎಂ, ಮಾಸ್ತಿಕಟ್ಟೆ(Mastikatte)ಯಲ್ಲಿ 112 ಎಂಎಂ, ಸಾವೇಹಕ್ಲು (savehaklu) ಜಲಾಶಯ ವ್ಯಾಪ್ತಿಯಲ್ಲಿ 46 ಎಂಎಂ ಮಳೆಯಾಗಿದೆ.
https://suddikanaja.com/2022/05/07/discussion-on-releasing-water-from-gajanur-dam-during-rainy-season/