ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ರಾಜೀವಗಾಂಧಿ ಬಡಾವಣೆಯಲ್ಲಿ ಬಜರಂಗ ದಳದ ಕಾರ್ಯಕರ್ತ ಕಾಂತರಾಜು(27) ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ರಾಜೀವಗಾಂಧಿ ಬಡಾವಣೆ ನಿವಾಸಿಗಳಾದ ಸಿದ್ಧಿಖಿ, ಶೊಯೇಬ್, ಜುನೈದ್, ಮುಬಾರಕ್ ಎಂಬುವವರನ್ನು ಬಂಧಿಸಲಾಗಿದೆ. ಸೋಮವಾರ ರಾತ್ರಿ ಊಟ ಮಾಡಿ ಮನೆಯ ಮುಂದೆ ವಾಕಿಂಗ್ ಮಾಡುವಾಗ ಐದು ಜನ ಸೇರಿ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಪರಿಣಾಮ ಕಾಂತರಾಜು ಅವರ ಬಲಗೈ ತೋಳು, ಬಲಗೈ ಮಣಿಕಟ್ಟು ಹಾಗೂ ಎರಡೂ ಕಾಲಿನ ಮಂಡಿ ಚಿಪ್ಪನ ಭಾಗಕ್ಕೆ ರಕ್ತಗಾಯಗಳಾಗಿವೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
READ | ತಡರಾತ್ರಿ ಅನ್ಯಕೋಮಿನವರಿಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ದೂರಿನಲ್ಲಿ ಏನಿದೆ?
ಬಜರಂಗ ದಳ ಹರ್ಷನ ಕೊಲೆಯ ವಿಚಾರವಾಗಿ ಹೋರಾಡಿದ್ದರಂದ ದಾಳಿ ಮಾಡಲಾಗಿದೆ. ನಿನ್ನ ಹಾಗೂ ನಿನ್ನ ಸ್ನೇಹಿತರನ್ನು ಬಿಡುವುದಿಲ್ಲ ಎಂದು ಆರೋಪಿಗಳು ಧಮಕಿ ಹಾಕಿದ್ದಾರೆಂದು ಕಾಂತರಾಜು ದೂರಿನಲ್ಲಿ ತಿಳಿಸಿದ್ದಾರೆ.