ಸುದ್ದಿ ಕಣಜ.ಕಾಂ | DISTRICT | ARECANUT DISEASE
ಶಿವಮೊಗ್ಗ: ಕಳೆದ 15 ರಿಂದ 20 ದಿನಗಳಿಂದ ಮುಂಗಾರಿನ ಆರ್ಭಟ ಜೋರಾಗಿದ್ದು, ಪ್ರಸ್ತುತ ಅಡಿಕೆಯಲ್ಲಿ ಕಂಡು ಬರಬಹುದಾದ ಕೊಳೆರೋಗಕ್ಕೆ ಕೊಳೆರೋಗದ ಆತಂಕಎದುರಾಗುವ ಸಾಧ್ಯತೆ ಇದೆ. ಈ ರೋಗದ ನಿಯಂತ್ರಣಕ್ಕೆ ಕೆಳಗಿನ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಲಾಗಿದೆ.
ನಿಯಂತ್ರಣ ಕ್ರಮಗಳೇನು?
ಶೇ.1 ರಷ್ಟು ಬೋರ್ಡೋ ದ್ರಾವಣ(1 ಕೆ.ಜಿ ಮೈಲುತ್ತುತ್ತ+1 ಕೆ.ಜಿ ಸುಣ್ಣವನ್ನು 100 ಲೀಟರ್ ನೀರಿನಲ್ಲಿ) ಸಿಂಪಡಿಸುವ ಮೂಲಕ ಕೊಳೆರೋಗ ಹಾನಿಯ ತೀವ್ರತೆಯನ್ನು ತಡೆಗಟ್ಟಬಹುದಾಗಿರುತ್ತದೆ. ಅಡಿಕೆ ಬೆಳೆದಿರುವ ರೈತರು ಮಳೆಯ ಬಿಡುವನ್ನು ನೋಡಿಕೊಂಡು ಮೇಲಿನ ದ್ರಾವಣ ಸಿಂಪಡಿಸುವುದರ ಮೂಲಕ ಅಡಿಕೆ ಬೆಳೆಯನ್ನು ಕೊಳೆರೋಗದ ಬಾಧೆಯಿಂದ ತಡೆಗಟ್ಟಬಹುದು.
ಈ ಕುರಿತು ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ರೈತ ಸಂಪರ್ಕದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಹಾಗೂ ಆಯಾ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಬಹುದು.