ಸುದ್ದಿ ಕಣಜ.ಕಾಂ | KARNATAKA | VIRAL NEWS
ಬೆಂಗಳೂರು: ರಾಜ್ಯ ಸರ್ಕಾರ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳೂ ಫೋಟೊ/ ವಿಡಿಯೋ ಮಾಡದಂತೆ ಹೊರಡಿಸಿದ ಸುತ್ತೋಲೆಯಲ್ಲಿ ಸಾಕಷ್ಟು ಕನ್ನಡ ಕಾಗುಣಿತಗಳು ತಪ್ಪಾಗಿದ್ದವು. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ರಾಜ್ಯ ಸರ್ಕಾರ ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಇದರಲ್ಲಿ ತಪ್ಪುಗಳನ್ನು ಸರಿಪಡಿಸಲಾಗಿದೆ.
ಏನೇನು ಪ್ರಮಾದಗಳಾಗಿದ್ದವು? | |
ತಪ್ಪು | ಸರಿ |
ನಡವಳಿಗಳು | ನಡಾವಳಿಗಳು |
ಪ್ರಸತ್ತಾವನೆ | ಪ್ರಸ್ತಾವನೆ |
ಮೇಲೇ | ಮೇಲೆ |
ಬಾಗ | ಭಾಗ |
ಕರ್ನಾಟಾ | ಕರ್ನಾಟಕ |
ಆಡಳಿದ | ಆಡಳಿತ |
ಮೇಲ್ಕಂಡ ಎಲ್ಲ ಕಾಗುಣಿತಗಳನ್ನು ಸರಿಪಡಿಸಿ ನೂತನ ಸುತ್ತೋಲೆಯನ್ನು ಸರ್ಕಾರ ಹೊರಡಿಸಿದೆ. ಅದೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
READ | ವಿಶ್ವ ಹಾವುಗಳ ದಿನ ಇಂದು, ಸರ್ಪ ಜಗತ್ತಿನ ವಿಶೇಷ ಇಲ್ಲಿದೆ, ಕಡಿತ ತಪ್ಪಿಸಲು ಹೀಗೆ ಮಾಡಿ