ಸುದ್ದಿ ಕಣಜ.ಕಾಂ | CITY | RAIN DAMAGE
ಶಿವಮೊಗ್ಗ: ನಗರದ ರಾಜೇಂದ್ರ ನಗರದಲ್ಲಿ ಬೃಹದಾಕಾರದ ಮರವೊಂದು ಬುಡಸಮೇತ ನೆಲಕ್ಕುರುಳಿದ್ದು, ಕೆ.ಎಚ್.ಬಿ. ವಸತಿ ಗೃಹದ ಮನೆ ಕೂಡ ಜಖಂಗೊಂಡಿದೆ. ಆದರೆ, ಮನೆಯಲ್ಲಿ ಯಾರೂ ವಾಸವಿಲ್ಲದ ಕಾರಣ ಜೀವಹಾನಿಯಾಗಿಲ್ಲ. ಆದರೆ, ಕೆಲಹೊತ್ತು ವಿದ್ಯುತ್ ವ್ಯತ್ಯಯವಾಗಿತ್ತು. ಸಂಚಾರಕ್ಕೂ ತೊಂದರೆ ಆಗಿತ್ತು.
ಘಟನಾ ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಧಾವಿಸಿ ಮರ ತೆರವುಗೊಳಿಸಿದ್ದಾರೆ.