ಸುದ್ದಿ ಕಣಜ.ಕಾಂ | TALUK | CRIME NEWS
ಸೊರಬ: ವರದಕ್ಷಿಣೆ ಕಿರುಕುಳ ತಡೆಯಲಾಗದೇ ತಾಯಿ ಮತ್ತು ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಶನಿವಾರ ನಡೆದಿದೆ.
ನಯನಾ(27), ಗುರು(4) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ಕುಂಭತ್ತಿ ಗ್ರಾಮದ ನಯನಾ ಅವರು ಕಲ್ಲಗಳಲೆ ಗ್ರಾಮದ ಶರತ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು.
READ | 2 ವಾರದ ಮಳೆಗೆ ಶಿವಮೊಗ್ಗದಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ನಷ್ಟ, ಎಲ್ಲಿ ಏನಾಗಿದೆ?
ಮಗಳು ಮತ್ತು ಮೊಮ್ಮಗನ ಸಾವಿಗೆ ನಯನಾ ಅವರ ಪತಿ ಶರತ್ ಮತ್ತು ಮಾವ, ಅತ್ತೆ ನೀಡುತ್ತಿದ್ದ ವರದಕ್ಷಿಣೆ ಕಾರಣವೆಂದು ನಯನಾ ಅವರ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.