ಸುದ್ದಿ ಕಣಜ.ಕಾಂ | DISTRICT | RAIN DAMAGE
ಶಿವಮೊಗ್ಗ: ಜಿಲ್ಲೆಯಲ್ಲಿ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ.56.8ರಷ್ಟು ಮಳೆ ಕೊರತೆಯಾಗಿತ್ತು. ಜೂನ್ ತಿಂಗಳ ವಾಡಿಕೆ ಮಳೆ 472 ಎಂಎಂ ಇದ್ದು, ವಾಸ್ತವದಲ್ಲಿ 203.8 ಎಂಎಂ ಮಳೆಯಾಗಿದೆ. ಆದರೆ, ಜುಲೈ 1ರಿಂದ 19ರ ವರೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ವಾಡಿಕೆ 480 ಎಂಎಂಗಿಂತ (853 ಎಂಎಂ) ಶೇ.78ರಷ್ಟು ಮಳೆಯಾಗಿದೆ.
ಈ 20 ದಿನಗಳಲ್ಲಿ ಜಿಲ್ಲೆ ಪ್ರತಿಯೊಂದು ತಾಲೂಕು ಅತ್ಯಧಿಕ ಮಳೆಯನ್ನು ಅನುಭವಿಸಿವೆ. ಪರಿಣಾಮ 163 ಹಳ್ಳಿಗಳು ಹಾನಿಗೀಡಾಗಿವೆ.
READ | ತಾಳಗುಪ್ಪ- ಮೈಸೂರು ಪ್ಯಾಸೆಂಜರ್ ಪುನಾರಂಭ, ಇಲ್ಲಿದೆ ವೇಳಾಪಟ್ಟಿ
- ಮಳೆ ಹಾನಿಯ ಹೈಲೈಟ್ಸ್
- ಸಂಪೂರ್ಣ 35, ಹೆಚ್ಚು 120 ಮತ್ತು ಭಾಗಶಃ 418 ಸೇರಿ ಒಟ್ಟು 573 ಮನೆಗಳು ಹಾನಿಗೆ ಒಳಪಟ್ಟಿವೆ.
- ಒಟ್ಟು 189 ಮನೆಗಳಿಗೆ ನೀರು ನುಗ್ಗಿವೆ. ಹೀಗಾಗಿ, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
- 1398 ಹೆಕ್ಟೇರ್ ಕೃಷಿ ಭೂಮಿ(ಭತ್ತ, ಮೆಕ್ಕೆ ಜೋಳ) ಹಾನಿಯಾಗಿದ್ದು, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿಲ್ಲ ಎಂದು ವರದಿ ತಿಳಿಸಿದೆ
- 258 ಕಿ.ಮೀ ಹಳ್ಳಿಗಳ ರಸ್ತೆಗಳು ಹಾಳಾಗಿವೆ.
- 866 ವಿದ್ಯುತ್ ಕಂಬಗಳು ಹಾಗೂ 16 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ.
- 13 ಸರ್ಕಾರಿ ಕಚೇರಿ ಹಾಗೂ ಪಿಎಚ್.ಸಿಗಳಿಗೆ ಹಾನಿ
- 102 ಪ್ರಾಥಮಿಕ ಶಾಲೆಗಳು, 53 ಅಂಗನವಾಡಿ ಕಟ್ಟಡಗಳು, 19 ಸೇತುವೆಗಳಿಗೆ ಹಾನಿ
ಜಿಲ್ಲೆಯಲ್ಲಿ ಮೂರು ಸಾವು,
ಒಟ್ಟು ಮೂವರು ಮೃತಪಟ್ಟಿದ್ದು, ಸೊರಬ, ಹೊಸನಗರ ಮತ್ತು ತೀರ್ಥಹಳ್ಳಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ನೆರೆಯಿಂದಾಗಿ 559 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಭದ್ರಾವತಿಯಲ್ಲಿ ಮೂರು ಕಾಳಜಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಇದರಲ್ಲಿ 534 ಜನ ಆಶ್ರಯ ಪಡೆದಿದ್ದಾರೆ.
https://suddikanaja.com/2021/03/05/fire-accident-in-sorab/