ಸುದ್ದಿ ಕಣಜ.ಕಾಂ | DISTRICT | RELIGION NEWS
ಶಿವಮೊಗ್ಗ: ಕೋವಿಡ್’ನಿಂದಾಗಿ ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಗುಡೇಕಲ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಆಡಿಕೃತ್ತಿಕೆ ಹರೋಹರ ಜಾತ್ರೆ (Shree Baala Subramanya Swamy Temple) ಶನಿವಾರ ಅದ್ಧೂರಿಯಾಗಿ ನಡೆಯಿತು.
ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ಕೃತಾರ್ಥರಾದರು. ಹರಕೆಯಂತೆ ಕಾವಡಿಗಳನ್ನು ಹೊತ್ತು ಬಾಲಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಗೆ ಆಗಮಿಸಿದರು. ತುಂಗಾನದಿಯಲ್ಲಿ ಮಿಂದು ಮಡಿಯುಟ್ಟು, ಹಳದಿ ವಸ್ತ್ರಗಳನ್ನು ತೊಟ್ಟ ಭಕ್ತರು ಭುಜದ ಮೇಲೆ ಕಾವಡಿಯನ್ನು ಹೊತ್ತಿದ್ದರು.
READ | KSEಗೆ ತಟ್ಟಲಿದೆ BSY ಶಾಪ
ಮೊದಲನೇ ದಿನ ದೇವಾಲಯದಲ್ಲಿ ಅಭಿಷೇಕ ಮತ್ತು ಮಂಗಳಾರತಿ ಮಾಡಿದರು. ಕಾವಡಿಗಳನ್ನು ಹೊತ್ತು ತಂದು ದೇವರಿಗೆ ಅರ್ಪಿಸುವುದು ಈ ಜಾತ್ರೆಯ ವೈಶಿಷ್ಟ್ಯ.
ಜಾತ್ರೆಯಲ್ಲಿ ಜನರ ಸಂಭ್ರಮ
ದೇವಾಲಯ ಸುತ್ತಮುತ್ತ ಬೆಂಡು, ಬತ್ತಾಸು, ಖಾರ, ಮಂಡಕ್ಕಿ, ಮಕ್ಕಳ ಆಟಿಕೆ ವಸ್ತುಗಳು, ಬಳೆ, ಹಣ್ಣು ಕಾಯಿಗಳನ್ನು ಮಾರಾಟ ಮಾಡಲಾಯಿತು. ಮೊದಲನೇ ದಿನಕ್ಕೆ ಹೋಲಿಸಿದರೆ ಎರಡನೇ ದಿನವಾದ ಶನಿವಾರ ಭಾರೀ ಸಂಖ್ಯೆಯಲ್ಲಿ ಭಕ್ತಸಾಗರ ಹರಿದುಬಂದಿತ್ತು. ಹೀಗಾಗಿ, ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕೂಡ್ಲಿ ಶ್ರೀ ಸಂಗಮೇಶ್ವರ ಜಾತ್ರೆ, ತುಂಗ ಭದ್ರಾದಲ್ಲಿ ಪುಣ್ಯ ಸ್ನಾನ ಮಾಡಿ ಪುನಿತರಾದ ಭಕ್ತರು