ಸುದ್ದಿ ಕಣಜ.ಕಾಂ | DISTRICT | GUDDEKAL TEMPLE
ಶಿವಮೊಗ್ಗ: ಗುಡ್ಡೇಕಲ್ (Guddekal)ನಲ್ಲಿರುವ ಬಾಲಸುಬ್ರಹ್ಮಣ್ಯ ಸ್ವಾಮಿಯ ಆಡಿಕೃತ್ತಿಕೆ ಹರೋಹರ ಜಾತ್ರೆ ಆಚರಣೆಗೆ ದಿನಾಂಕ ನಿಗದಿಪಡಿಸಲಾಗಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆಯನ್ನು ಜುಲೈ 22 ಮತ್ತು 23 ರಂದು ದೇವಸ್ಥಾನ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ. ರಾಜು ತಿಳಿಸಿದರು.
ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಜಾತ್ರೆ ಆಚರಿಸಲು ಸಾಧ್ಯವಾಗಿಲ್ಲ. ಈ ವರ್ಷ ಭಕ್ತರ ಆಶಯದಂತೆ ಸಂಪ್ರದಾಯಬದ್ಧವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
READ | ಮೂರು ತಾಲೂಕುಗಳಲ್ಲಿ ಶಾಲೆಗಳಿಗೆ ರಜೆ, ಯಾವ ತಾಲೂಕಿಗೆ ಅನ್ವಯ?
ಜಾತ್ರೆಗೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಲಿದ್ದಾರೆ. ಭಕ್ತರು ಇಲ್ಲಿಗೆ ಬಂದು ಹರಕೆ ತೀರಿಸುತ್ತಾರೆ. ಈ ಬಾರಿಯೂ ಅದಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಆಷಾಢ ಅಥವಾ ಶ್ರಾವಣ ಮಾಸದಲ್ಲಿ ಕೃತ್ತಿಕೆ ದಿನದಂದು ಎರಡು ದಿನ ಈ ಉತ್ಸವ ಆಚರಿಸಲಾಗುತ್ತದೆ. ಮೊದಲನೆಯ ದಿನ ಭರಣಿ ಕಾವಡಿ ಹಾಗೂ ಎರಡನೆಯ ದಿನವನ್ನು ಅಡಿ ಕೃತ್ತಿಕೆ ಆಚರಿಸಲಾಗುತ್ತದೆ. ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಕೆಲಸ ನಡೆಯುತ್ತಿರುವುದರಿಂದ ಭಕ್ತರಿಗೆ ಅಡಚಣೆಯಾಗುವ ಸಾಧ್ಯತೆ ಇದೆ ಎಂದರು.
80 ವರ್ಷಗಳ ಹಿಂದೆ ಸ್ಥಾಪನೆ
ತಮಿಳುನಾಡಿನಿಂದ ಗುಡ್ಡೇಕಲ್ ಗೆ ಕೆಲಸಕ್ಕೆಂದು ಆಗಮಿಸಿದ್ದ ಮಹಿಳೆಯೊಬ್ಬರು 80 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಸಣ್ಣ ವಿಗ್ರಹ ಸ್ಥಾಪನೆ ಮಾಡಿದ್ದಾರೆ. ನಂತರ ಪೂಜೆ ಮಾಡಲು ಆರಂಭಿಸಿದ್ದರು. ಈಗ ದೇವಸ್ಥಾನ ದೊಡ್ಡದಾಗಿದೆ. ಭಕ್ತರ ಸಂಖ್ಯೆಯೂ ಹೆಚ್ಚಲಿದೆ.
ಸಮಿತಿಯ ಪಿ.ರಘುಕುಮಾರ್, ಕೆ. ವಿಶ್ವನಾಥ, ಡಿ. ರಾಜಶೇಖರಪ್ಪ ಎಂ. ಸುಬ್ರಮಣಿ, ಎಂ. ಪಿ. ಸಂಪತ್, ಪಿ. ರವಿಕುಮಾರ್, ಎಂ.ಲೋಕೇಶ್ ಇತರರಿದ್ದರು.
https://suddikanaja.com/2022/01/31/varamballi-kalyaneswara-temlple-program-organized-at-hosanagar-taluk/