ಸುದ್ದಿ ಕಣಜ.ಕಾಂ | TALUK | RAILWAY NEWS
ಹೊಸನಗರ: ತಾಲೂಕಿನ ರಿಪ್ಪನ್’ಪೇಟೆ ಬಳಿಯ ಕೆಂಚನಾಲ ರೈಲ್ವೆ ನಿಲ್ದಾಣ ಎದುರು ಹಳಿಯ ಮೇಲೆ ಮರವೊಂದು ಬಿದ್ದ ಪರಿಣಾಮ ರೈಲು ಸಂಚಾರಕ್ಕೆ ತೊಡಕಾಯಿತು.
ಭಾನುವಾರ ಬೆಳಗ್ಗೆ ಹಳಿಯ ಮೇಲೆ ಸುಮಾರು ನೂರು ವರ್ಷ ಹಳೆಯ ಮರವು ಬಿದಿದ್ದರಿಂದ ತಾಳಗುಪ್ಪ-ಬೆಂಗಳೂರು ರೈಲು ಎರಡು ಗಂಟೆ ತಡವಾಗಿ ಸಂಚರಿಸಿತು. ಘಟನೆಯ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತೆರವು ಕಾರ್ಯಾಚರಣೆ ಕೈಗೊಂಡರು.