ಸುದ್ದಿ ಕಣಜ.ಕಾಂ | CITY | AGUMBE GHAT
ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಚಲಿಸುತಿದ್ದ ಟಾಟಾ ಏಸ್ ವಾಹನದ ಮೇಲೆ ಮರವೊಂದು ಬಿದ್ದ ಪರಿಣಾಮ ಹಲವು ಹೊತ್ತು ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು.
ಸೋಮೇಶ್ವರದಿಂದ ಬರುತ್ತಿದ್ದ ವಾಹನದ ಮೇಲೆ ಎರಡನೇ ತಿರುವುನಲ್ಲಿ ಮರ ಉರುಳಿ ಬಿದ್ದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರವು ವಾಹನದ ಹಿಂಬದಿಯಲ್ಲಿ ಬೀಳುತಿದ್ದಂತೆಯೇ ಚಾಲಕ ಮತ್ತು ಆತನೊಂದಿಗಿದ್ದ ಮತ್ತೊಬ್ಬರು ತಕ್ಷಣ ಕೆಳಗೆ ಇಳಿದಿದ್ದಾರೆ. ಆದರೆ, ರಾತ್ರಿ ಹೊತ್ತಲ್ಲಿ ಘಟನೆ ನಡೆದಿದ್ದರಿಂದ ವಾಹನದ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಲು ಸಾಧ್ಯವಾಗಿರಲಿಲ್ಲ. ಅರಣ್ಯಿ ಇಲಾಖೆ ಸಿಬ್ಬಂದಿ ಈ ಕಾರ್ಯದಲ್ಲಿ ಪ್ರವೃತ್ತರಾಗಿದ್ದಾರೆ.
» ಓದುಗರ ಗಮನಕ್ಕೆ | ನೀವೂ ರಿಪೋರ್ಟರ್ ಆಗಿ. ನಿಮ್ಮ ಭಾಗದಲ್ಲಿನ ಘಟನೆ, ಕಾರ್ಯಕ್ರಮ, ಸಮಸ್ಯೆಗಳ ಬಗ್ಗೆ ನಮಗೆ ಬರೆದು ಕಳುಹಿಸಿ. ನಮ್ಮ ವಾಟ್ಸಾಪ್ ಸಂಖ್ಯೆ +91 9483130291ಗೆ ಸುದ್ದಿಯನ್ನು ಕಳುಹಿಸಿ.
https://suddikanaja.com/2022/03/03/dc-dr-r-selvamani-order-to-prohibit-light-and-heavy-vehicle-movement-in-agumbe-ghat/