ಸುದ್ದಿ ಕಣಜ.ಕಾಂ | TALUK | RAINFALL
ಶಿವಮೊಗ್ಗ: ಜಿಲ್ಲೆಯಾದ್ಯಂತ ಧಾರಾಕಾರವಾಗಿ ವರುಣನ ಆರ್ಭಟ ಮುಂದುವರಿದಿದ್ದು, ಭದ್ರಾವತಿ ತಾಲೂಕಿನ ಮನೆಯ ಗೋಡೆ ಕುಸಿದುಬಿದ್ದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾಚಿಗೊಂಡನಹಳ್ಳಿ ಗ್ರಾಮದ ಸುಜಾತಾ(55) ಎಂಬುವವರು ಮೃತಪಟ್ಟಿದ್ದು, ಕೃಷ್ಣಮೂರ್ತಿ ಅವರು ಗಾಯಗೊಂಡಿದ್ದಾರೆ. ಗಾಯಾಳುವನ್ನು ತಕ್ಷಣ ಶಿವಮೊಗ್ಗ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.