ಸುದ್ದಿ ಕಣಜ.ಕಾಂ | TALUK | RAINFALL
ಶಿವಮೊಗ್ಗ: ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಜಲಮೂಲಗಳೆಲ್ಲ ಸಮೃದ್ಧವಾಗಿ ತುಂಬಿಕೊಂಡಿವೆ. ಇದರ ನಡುವೆಯೂ ಮಳೆ ಸುರಿಯುತ್ತಿರುವುದರಿಂದ ಕೆರೆಗಳು ತುಂಬಿ ತುಳುಕುತ್ತಿವೆ. ಪರಿಣಾಮ ಬಡಾವಣೆಗಳು ಜಲಾವೃತಗೊಂಡಿವೆ.
READ | ಶಿವಮೊಗ್ಗದಲ್ಲಿ ಸೂರು ಕಳೆದುಕೊಂಡವರಿಗೆ ಕಾಳಜಿ ಕೇಂದ್ರಗಳ ಆಸರೆ, ಎಲ್ಲೆಲ್ಲಿ ಬಿದ್ದಿವೆ ಮನೆ?
ಬಸವನಗಂಗೂರು ಕೆರೆ ಭರ್ತಿ
ಶಿವಮೊಗ್ಗ ತಾಲೂಕಿನ ಬಸವನಗಂಗೂರು ಕೆರೆ (Basavanagangur lak) ಕೋಡಿ ಬಿದ್ದಿರುವುದರಿಂದ ತಗ್ಗು ಪ್ರದೇಶ, ಕೃಷಿ ಜಮೀನುಗಳು ಜಲಾವೃತಗೊಂಡಿವೆ. ಅವ್ಯವಸ್ಥಿತ ಕೋಡಿ ಕಾಲುವೆಯಿಂದ ತಗ್ಗು ಪ್ರದೇಶದಲ್ಲಿರುವ ಕೆ.ಎಚ್.ಬಿ. ಕಾಲೋನಿ (KHB colony) ಜಲಾವೃತವಾಗಿದೆ. ಆದರೆ, ಆಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ.