ಸುದ್ದಿ ಕಣಜ.ಕಾಂ | DISTRICT | POCSO
ಶಿವಮೊಗ್ಗ: ಅಪ್ರಾಪ್ತೆಯೊಂದಿಗೆ ಮದುವೆಯಾಗಿದ್ದ ಕಾರಣಕ್ಕೆ ಮದುಮಗ ಸೇರಿದಂತೆ ಕಲ್ಯಾಣ ಕಾರ್ಯಕ್ಕೆ ಸಾಕ್ಷಿಯಾದ ಒಟ್ಟು 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪುರೋಹಿತ, ಆಮಂತ್ರಣ ಪತ್ರಿಕೆ ಮುದ್ರಿಸಿದವರು, ಮದುವೆಗೆ ಜಾಗ ನೀಡಿದ ದೇವಸ್ಥಾನ ಸಮಿತಿಯವರು, ಫೋಟೋಗ್ರಾಫರ್, ಊಟೋಪಚಾರ ಮಾಡಿದ ಬಾಣಸಿಗರ, ವಧು-ವರರ ಕುಟುಂಬದವರು ಸೇರಿ ಒಟ್ಟು 11 ಜನರಿಗೆ ಕಂಟಕ ಎದುರಾಗಿದೆ.
READ | ತ್ಯಾವರೆಕೊಪ್ಪ ಹುಲಿ, ಸಿಂಹ ಧಾಮಕ್ಕೆ ಬರಲಿದೆ ಹೊಸ ಅತಿಥಿ
ಬೀಗರೂಟ ತಂದ ಸಂಕಷ್ಟ!
ಜುಲೈ 30ರಂದು ಸಂಪ್ರದಾಯದಂತೆ ಮದುವೆ ಮಾಡಲಾಗಿದೆ. ಮದುವೆಯಾದ ಎರಡು ದಿನಗಳ ಬಳಿಕ ಬೀಗರೂಟ ವ್ಯವಸ್ಥೆ ಮಾಡಲಾಗಿದೆ. ಈ ವಿಚಾರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯವರ ಕಿವಿಗೆ ಬಿದ್ದಿದೆ. ಸ್ಥಳಕ್ಕೆ ಭೇಟಿ ನೀಡಿದ ಮಕ್ಕಳ ರಕ್ಷಣಾ ಸಮಿತಿಯವರು ಬಾಲಕಿಯನ್ನು ರಕ್ಷಿಸಿದ್ದಾರೆ.
ಗಮನಕ್ಕೆ | ಈ ಪ್ರಕರಣ ಬಾಲ್ಯ ವಿವಾಹ ನಿಷೇಧ ಕಾಯ್ದೆ(Prohibition of Child Marriage Act)ಗೆ ಒಳಪಡುವುದರಿಂದ ಬಾಲಕಿಯ ಹೆಸರು ಊರು ಮತ್ತು ಇನ್ನ್ಯಾವುದೇ ರೀತಿಯ ಪರಿಚಯಗಳನ್ನು ಬಹಿರಂಗ ಪಡಿಸುವಂತಿಲ್ಲ.