ಸುದ್ದಿ ಕಣಜ.ಕಾಂ | DISTRICT | PUBLIC NOTICE
ಶಿವಮೊಗ್ಗ: ವೀರ ಸಾವರ್ಕರ್ ಅವರ ಫೋಟೊ ತೆರವುಗೊಳಿಸಿದ ಬಳಿಕ ನಡೆದ ಗಲಾಟೆಯಿಂದಾಗಿ ಮಂಗಳವಾರ ಶಾಲೆ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶಿಸಿದ್ದರು.
ಆದರೆ, ಪರಿಸ್ಥಿತಿ ತಿಳಿಗೊಂಡಿರುವುದನ್ನು ಮನಗಂಡು ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜುಗಳು ಆಗಸ್ಟ್ 17ರಂದು ಎಂದಿನಂತೆ ನಡೆಯಲಿದೆ ಎಂದು ಡಿಸಿ ತಿಳಿಸಿದ್ದಾರೆ.