ಸುದ್ದಿ ಕಣಜ.ಕಾಂ | 18 AUG 2022 | TALUK
ಭದ್ರಾವತಿ: ತಾಲ್ಲೂಕಿನ ಮಸರಹಳ್ಳಿ ಸಮೀಪ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಸಂಭವಿಸಿದೆ.
ರೈಲ್ವೆ ಹಳಿ ಸಮೀಪ ಮೊಬೈಲ್’ನಲ್ಲಿ ಮಾತನಾಡಿಕೊಂಡು ಹೋಗುತ್ತಿದ್ದಾಗ ಮಹಿಳೆಗೆ ರೈಲು ಡಿಕ್ಕಿ ಹೊಡೆದು ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
READ | ನಿಷೇಧಾಜ್ಞೆ ಭವಿಷ್ಯ ಇಂದು ನಿರ್ಧಾರ
ಶಿವಮೊಗ್ಗದಿಂದ ಹೊರಟ ಮೈಸೂರು ರೈಲು ಭದ್ರಾವತಿ ಮಾರ್ಗವಾಗಿ ಸಾಗುತ್ತಿದ್ದಾಗ ಘಟನೆ ನಡೆದಿದೆ. ಮೃತಪಟ್ಟ ಮಹಿಳೆ ರೈಲು ಬರುವ ವೇಳೆಯಲ್ಲಿ ತನ್ನ ಮಗನ ಜೊತೆಯಲ್ಲಿ ಮೊಬೈಲ್ ನಲ್ಲಿ ಮಾತಾಡುತ್ತಿದ್ದು, ರೈಲು ಬರುವುದನ್ನು ಗಮನಿಸಿಲ್ಲ ಎಂದು ತಿಳಿದುಬಂದಿದೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.