- 14 ಮನೆಗಳಲ್ಲಿ ಚಿನ್ನ, ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ ಇಬ್ಬರು ಆರೋಪಿಗಳ ಬಂಧನ
- 1 ಕೆಜಿ 130 ಗ್ರಾಂ ತೂಕದ ಬೆಳ್ಳಿಯ ಆಭರಣ, 504 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದ ಪೊಲೀಸರು
ಸುದ್ದಿ ಕಣಜ.ಕಾಂ | 20 AUG 2022 | CRIME NEWS
ಶಿರಾಳಕೊಪ್ಪ: ತೊಗರ್ಸಿ ಗ್ರಾಮದಲ್ಲಿ ನಡೆದ ಒಂದು ಕಳ್ಳತನ ಪ್ರಕರಣವನ್ನು ಬೇಧಿಸಲು ಹೋದ ಪೊಲೀಸರು ಪತ್ತೆ ಹಚ್ಚಿದ್ದು ಬರೋಬ್ಬರಿ 14 ಪ್ರಕರಣಗಳು! ಇಬ್ಬರನ್ನು ಬಂಧಿಸಿ ಅವರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಶಿರಾಳಕೊಪ್ಪ ಪಟ್ಟಣದ ದಾಸರ ಕಾಲೋನಿ ನಿವಾಸಿ ಚಿನ್ನಸ್ವಾಮಿ(50), ಮಹಾದೇವಯ್ಯ ಬಡಾವಣೆಯ ಬಿ.ಆರ್. ಕುಮಾರ್ (42) ಬಂಧಿತರು. ಈ ಆರೋಪಿಗಳ ಬಳಿಯಿಂದ ಅಂದಾಜು ₹21,02,700 ಮೌಲ್ಯದ 504 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಅಂದಾಜು ₹75,100 ಮೌಲ್ಯದ ಒಟ್ಟು 1 ಕೆಜಿ 130 ಗ್ರಾಂ ತೂಕದ ಬೆಳ್ಳಿಯ ಆಭರಣಗಳನ್ನು ಹಾಗೂ 1 ಎಲ್.ಪಿ.ಜಿ ಗ್ಯಾಸ್ ಸಿಲಿಂಡರ್ ಮತ್ತು ಕೃತ್ಯಕ್ಕೆ ಉಪಯೋಗಿಸಿದ 2 ದ್ವಿ ಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
READ | 17 ವರ್ಷಗಳ ಬಳಿಕ ಓಟ ನಿಲ್ಲಿಸಿದ ಇಂಟರ್ನೆಟ್ ಎಕ್ಸ್ಪ್ಲೋರರ್
ಜೂನ್ ನಲ್ಲಿ ತೊಗರ್ಸಿಯಲ್ಲಿ ಕಳ್ಳತನ
ತೊಗರ್ಸಿಯಲ್ಲಿ 2022ರ ಜೂನ್ 19ರಂದು ವಾಸದ ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದಾಗ ಯಾರೋ ಕಳ್ಳರು ಮನೆಯ ಬಾಗಿಲಿಗೆ ಹಾಕಿದ್ದ ಬೀಗವನ್ನು ಒಡೆದು ಮನೆಯ ಒಳಗಡೆ ಗಾಡ್ರೇಜ್ ಬೀರುವಿನಲ್ಲಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳು, ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು.
14 ಮನೆಗಳಲ್ಲಿ ಕಳ್ಳತನ
ಆರೋಪಿಗಳು ಶಿರಾಳಕೊಪ್ಪ ಪೊಲೀಸ್ ಠಾಣೆಯ 12 ಮತ್ತು ಸೊರಬ ಪೊಲೀಸ್ ಠಾಣೆಯ 2 ಪ್ರಕರಣಗಳು ಸೇರಿ ಒಟ್ಟು 14 ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ. ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://suddikanaja.com/2022/07/26/shiralakoppa-police-arrested-bike-theft-gang-and-siezed-sandal/