ಸುದ್ದಿ ಕಣಜ.ಕಾಂ | KARNATAKA | 26 AUG 2022
ಶಿವಮೊಗ್ಗ: ಕರ್ನಾಟಕ ಸಂಘವು 2021ನೇ ಸಾಲಿನ ಪುಸ್ತಕ ಬಹುಮಾನ ವಿಜೇತರ ಪಟ್ಟಿ(prize winners books list)ಯನ್ನು ಪ್ರಕಟಿಸಿದೆ.
ಈ ಕುರಿತು ಕರ್ನಾಟಕ ಸಂಘದಲ್ಲಿ ಶುಕ್ರವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ (MN Sundarraj) ಅವರು ಪಟ್ಟಿಯನ್ನು ಬಿಡುಗಡೆ ಮಾಡಿದರು.
ಬಹುಮಾನವು 10 ಸಾವಿರ ರೂಪಾಯಿ ಬಹುಮಾನವನ್ನು ಒಳಗೊಂಡಿದೆ. ಪ್ರತಿ ವರ್ಷ 12 ಬಹುಮಾನಗಳನ್ನು ನೀಡುತ್ತಾ ಬರಲಾಗುತ್ತಿದೆ. ಈ ಸಲ 325 ಪುಸ್ತಕಗಳು ಬಂದಿದ್ದವು. ಅದರಲ್ಲಿ ಅತ್ಯಂತ ಪಾರದರ್ಶಕವಾಗಿ ಗುಣಮಟ್ಟ ಕಾಪಾಡಿಕೊಂಡು ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
READ | ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಶಿವಮೊಗ್ಗದಲ್ಲಿ ಬೃಹತ್ ಪ್ರತಿಭಟನೆ, ಶ್ರೀಗಳು ನೀಡಿದ ಎಚ್ಚರಿಕೆ ಏನು?
ಬಹುಮಾನ ವಿಜೇತರ ಪಟ್ಟಿ
ಬಹುಮಾನಗಳ ಪೈಕಿ 9 ಅನ್ನು ಸಂಘದ ಗೌರವ ಸದಸ್ಯರ ಹೆಸರಿನಲ್ಲಿ ನೀಡಲಾಗುತ್ತದೆ.
- ಕಾದಂಬರಿ (ಕುವೆಂಪು)- ವೈಷ್ಣವ ಜನತೋ-ಲೋಕೇಶ್ ಅಗಸನಕಟ್ಟೆ (ಚಿತ್ರದುರ್ಗ)
- ಅನುವಾದ (ಎಸ್.ವಿ.ಪರಮೇಶ್ವರಭಟ್ಟ)- ಪ್ರೇಮಪತ್ರ-ಡಾ.ಎ.ಮೋಹನ್ ಕುಂಟಾರ್, ಹಂಚಿ, ವಿದ್ಯಾರಣ್ಯ
- ಮಹಿಳಾ ಲೇಖಕರು(ಎಂ.ಕೆ.ಇಂದಿರಾ)- ಆಮೆ- ಸ್ನೇಹಲತಾ ದಿವಾಕರ್ ಕುಂಬ್ಳೆ, ಕಾಸರಗೋಡ, ಕೇರಳ
- ಮುಸ್ಲಿಂ ಲೇಖಕರು(ಪಿ.ಲಂಕೇಶ್)- ಭಾರತೀಯ ಧರ್ಮ- ಡಾ.ಸರ್ಫರಾಜ್ ಚಂದ್ರಗುತ್ತಿ, ಸಾಗರ
- ಕವನ ಸಂಕಲನ(ಜಿ.ಎಸ್.ಶಿವರುದ್ರಪ್ಪ)- ಶಯ್ಯಾಗೃಹದ ಸುದ್ದಿಗಳು- ಡಾ.ಶೋಭಾ ನಾಯಕ, ಬೆಳಗಾವಿ
- ಅಂಕಣ ಬರಹ(ಹಾ.ಮಾ.ನಾಯಕ)- ಓದಿನ ಮನೆ- ದೀಪಾ ಫಡ್ಕೆ, ಬೆಂಗಳೂರು
- ಸಣ್ಣ ಕಥೆ(ಯು.ಆರ್.ಅನಂತಮೂರ್ತಿ)- ಬೊಗಸೆ ತುಂಬ ನಕ್ಷತ್ರಗಳು- ವಸುಮತಿ ಉಡುಪ, ಮೈಸೂರು
- ನಾಟಕ(ಕೆ.ವಿ.ಸುಬ್ಬಣ್ಣ)- ಪಂಚಾವರಂ- ಮಹಾಂತೇಶ್ ನವಲಕಲ್, ಕಲಬುರಗಿ
- ಪ್ರವಾಸ ಸಾಹಿತ್ಯ(ಕುಕ್ಕ ಸುಬ್ರಹ್ಮಣ್ಯ ಶಾಸ್ತ್ರಿ)- ತಿರೆಯ ತೀರಗಳಲ್ಲಿ ನಾ ಕಂಡೆ- ಎಸ್.ಪಿ.ವಿಜಯಲಕ್ಷ್ಮೀ, ಬೆಂಗಳೂರು
- ವಿಜ್ಞಾನ ಸಾಹಿತ್ಯ(ಹಸೂಡಿ ವೆಂಕಟಶಾಸ್ತ್ರಿ)- ಡೇಟಾ ದೇವರು ಬಂದಾಯ್ತು- ಗುರುರಾಜ್ ಎಸ್.ದಾವಣಗೆರೆ, ಬೆಂಗಳೂರು
- ಮಕ್ಕಳ ಸಾಹಿತ್ಯ(ನಾ.ಡಿಸೋಜಾ)- ಕಥೆಗಳ ತೋರಣ ಭಾಗ 2- ಶಾಲಿನಿಮೂರ್ತಿ, ಬೆಂಗಳೂರು
- ವೈದ್ಯ ಸಾಹಿತ್ಯ(ಎಚ್.ಡಿ.ಚಂದ್ರಪ್ಪಗೌಡ)- ಮಧುಮೇಹದೊಂದಿಗೆ ಮಧುರ ಬಾಳ್ವೆ, ಡಾ.ಕೃಷ್ಣ ಎಸ್.ಭಟ್, ಭದ್ರಾವತಿ
ಮಾಧ್ಯಮಗೋಷ್ಠಿಯಲ್ಲಿ ಕರ್ನಾಟಕ ಸಂಘದ ಉಪಾಧ್ಯಕ್ಷ ಪ್ರೊ.ಎಚ್.ಆರ್.ಶಂಕರನಾರಾಯಣಶಾಸ್ತ್ರಿ, ಗೌರವ ಕಾರ್ಯದರ್ಶಿ ಪ್ರೊ.ಎಂ.ಆಶಾಲತಾ, ಕೋಶಾಧ್ಯಕ್ಷ ಎಚ್.ಡಿ.ಮೋಹನಶಾಸ್ತ್ರಿ, ಪ್ರಮುಖರಾದ ಡಾ.ಎಸ್.ನಾಗಮಣಿ, ಚಕ್ರಪಾಣಿ, ವಿನಯ್ ಶಿವಮೊಗ್ಗ ಉಪಸ್ಥಿತರಿದ್ದರು.
https://suddikanaja.com/2021/07/31/independance-day-special-offer-on-books-purchase/