ಸುದ್ದಿ ಕಣಜ.ಕಾಂ | DISTRICT | 26 AUG 2022
ಶಿವಮೊಗ್ಗ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB)ಯು ಆಗಸ್ಟ್ 31ರಂದು ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ವಿವಿಧ ಸ್ಥಳಗಳಲ್ಲಿ ಸಂಚಾರಿ ವಾಹನದ ವ್ಯವಸ್ಥೆಯನ್ನು ಏರ್ಪಡಿಸಿದೆ.
READ | ಶಿವಮೊಗ್ಗದಲ್ಲಿ ಗಣೇಶ ಹಬ್ಬ ಹಿನ್ನೆಲೆ ಇಬ್ಬರಿಗೆ ಗಡಿಪಾರು, ಕಾರಣವೇನು?
ಎಲ್ಲೆಲ್ಲಿ ಯಾವಾಗ ಬರಲಿದೆ ವಾಹನ?
- ಹೊಸಮನೆ 5ನೇ ತಿರುವು ಗಣಪತಿ ದೇವಸ್ಥಾನದ ಹತ್ತಿರ ಸಂಜೆ 6ರಿಂದ 6.30ರವರೆಗೆ
- ಗೋಪಾಳ ಬಸ್ ಸ್ಟ್ಯಾಂಡ್ ಸಂಜೆ 6.45 ರಿಂದ 7.15ರವರೆಗೆ
ಗೋಪಾಲಗೌಡ ಬಡಾವಣೆ, ಇನ್ಕಂಟ್ಯಾಕ್ಸ್ ಕಚೇರಿ ಹತ್ತಿರ ರಾತ್ರಿ 7.30 ರಿಂದ 8.00ರವರೆಗೆ - ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ- ರಾತ್ರಿ 8.15 ರಿಂದ 8.45ರವರೆಗೆ
- ಕಾಶೀಪುರ ಬಸ್ಸ್ಟ್ಯಾಂಡ್ – ರಾತ್ರಿ 9 ರಿಂದ 9.15 ರವರೆಗೆ
- ಚೌಡೇಶ್ವರಿ ದೇವಸ್ಥಾನದ ಹತ್ತಿರ, ಲಾಲ್ ಬಹದ್ದೂರ್ ಶಾಸ್ತ್ರಿನಗರ ರಾತ್ರಿ 9.30 ರಿಂದ 10 ರವರೆಗೆ ಸಂಚಾರಿ ವಾಹನದ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರು ಈ ವ್ಯವಸ್ಥೆಯ ಉಪಯೋಗ ಪಡೆದುಕೊಳ್ಳುವಂತೆ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಬಿ.ಶಿವಕುಮಾರ್ ಮೊಬೈಲ್ ಸಂಖ್ಯೆ 6363023685 ಅನ್ನು ಸಂಪರ್ಕಿಸಬಹುದು.
https://suddikanaja.com/2022/02/05/good-news-for-farmers-2-krushi-sanjeevini-mobile-health-clinic-for-shimoga/